ಬೆಂಗಳೂರು: ಆಂಬ್ಯುಲೆನ್ಸ್ಗಾಗಿ ಕಾದು ಕುಳಿತು ರಸ್ತೆಯಲ್ಲೇ ಮೃತಪಟ್ಟಹನುಮಂತನಗರದ ಕೊರೊನಾ ಸೋಂಕಿತ ವ್ಯಕ್ತಿ ಮನೆಗೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ಶನಿವಾರ ಭೇಟಿ ನೀಡಿ ಕುಟುಂಬದವರ ಕ್ಷಮೆ ಯಾಚಿಸಿದರು.
‘ಇಂತಹ ಘಟನೆ ನಡೆಯಬಾರದಿತ್ತು, ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪರವಾಗಿ ಕ್ಷಮೆ ಕೋರುತ್ತೇನೆ’ ಎಂದು ಕುಟುಂಬದವರನ್ನು ಸಮಾಧಾನಪಡಿಸಿದರು.
ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ಬೆಳಿಗ್ಗೆ ದೃಢಪಟ್ಟ ಬಳಿಕ 55 ವರ್ಷದ ವ್ಯಕ್ತಿ, ಆಂಬುಲೆನ್ಸ್ಗೆ ಕರೆ ಮಾಡಿ 15 ದಿನಗಳಿಗೆ ಬೇಕಾಗುವಷ್ಟು ಬಟ್ಟೆ ತುಂಬಿಕೊಂಡು ಆಸ್ಪತ್ರೆಗೆ ಸೇರಲು ಮುಂದಾದರು. ಆಂಬುಲೆನ್ಸ್ಗಾಗಿ ಗಂಟೆ ಗಟ್ಟಲೆ ಕಾದಿದ್ದ ಅವರು ರಸ್ತೆ ಬದಿಯೇ ಕುಸಿದು ಬಿದ್ದು ಮೃತಪಟ್ಟಿದ್ದರು.