ವಿಧಾನಸೌಧ ಆವರಣದಲ್ಲಿ ಜೂನ್ 27ರಂದು ರಾಜ್ಯಮಟ್ಟದ ದಿನ ಆಚರಿಸಲಾಗುತ್ತಿದ್ದು, ಕೆಂಪೇಗೌಡರ 4 ಗೋಪುರ ಹಾಗೂ ಮಾಗಡಿಯಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿ ಬಳಿಯಿಂದ ದಿವ್ಯ ಜ್ಯೋತಿಯ ಮೂಲಕ ಬೆಳಿಗ್ಗೆ 9ಕ್ಕೆ ಮೆರವಣಿಗೆ ಆರಂಭವಾಗಲಿದೆ. ಗೋಪುರಗಳಿಂದ ಹೊರಡುವ ಮೆರವಣಿಗೆಗೆ ಬೆಂಗಳೂರು ನಗರ ಪ್ರತಿನಿಧಿಸುವ ಸಚಿವರು ಚಾಲನೆ ನೀಡಲಿದ್ದು, ಶಾಸಕರ ಸಮ್ಮುಖದಲ್ಲಿ ಗೋಪುರಗಳಿಂದ ವಿಧಾನಸೌದಧ ಆವರಣಕ್ಕೆ ದಿವ್ಯ ಜ್ಯೋತಿಯನ್ನು ಮೆರವಣಿಗೆಯ ಮೂಲಕ ತರಬೇಕು. ಅದಕ್ಕೆ ಬೇಕಾದಂತಹ ಸಿದ್ದತೆಗಳನ್ನು ಮಾಡಿಕೊಳ್ಳಲು ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಆರ್.ಆರ್. ನಗರ ವಲಯದ ಆಯುಕ್ತರಿಗೆ ಸೂಚನೆ ನೀಡಿದರು.