ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬೈಕ್ ನಲ್ಲಿ ಸಂಚರಿಸಿ ರಸ್ತೆ ಗುಂಡಿಗಳನ್ನು ಪರಿಶೀಲಿಸಿದ ಅವರು, ‘ಇಲಾಖೆಗಳ ಮುಖ್ಯಸ್ಥರು ಬೈಕ್ಗಳಲ್ಲಿ ಸಂಚರಿಸಿದರೆ ಸಾರ್ವಜನಿಕರ ಸಮಸ್ಯೆಗಳು ಅರಿವಿಗೆ ಬರುತ್ತವೆ. ಕಾರಿನಲ್ಲೇ ಸಂಚರಿಸುವ ನಮಗೆ ಬೈಕ್ ಸವಾರರ ಕಷ್ಟ ಅರ್ಥ ವಾಗದು. ಅದಕ್ಕಾಗಿ ನಾನು ಬೈಕ್ನಲ್ಲಿ ಸಂಚರಿಸಿದ್ದೇನೆ. ಸತ್ಯ ಹೇಳಬೇಕೆಂದರೆ ರಸ್ತೆಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಬೆನ್ನುನೋವು ಆರಂಭವಾಗಿದೆ. ರಸ್ತೆ ಗುಂಡಿಗಳ ಮುಚ್ಚಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು.