ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಸಚಿವ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ ಜತೆ ವಿಶೇಷಸಭೆ ನಡೆಸಿದ ಕಟೀಲ್ ಅವರು ಮೇಯರ್ ಚುನಾವಣೆ ಮತ್ತುಡಿ.ಕೆ.ಶಿವಕುಮಾರ್ ಬಂಧನ ಕುರಿತೂ ಚರ್ಚಿಸಿದರು.ಮೇಯರ್ ಚುನಾವಣೆ ಕುರಿತು ಗುರುವಾರ ಬೆಂಗಳೂರು ನಗರ ಕಾರ್ಪೊರೇಟರ್ಗಳು ಮತ್ತು ಶಾಸಕರ ಜತೆಗೂ ಮಾತುಕತೆ ನಡೆಸಲಿದ್ದಾರೆ. ಕೋರ್ ಕಮಿಟಿ ಸಭೆಯನ್ನೂ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ನವೆಂಬರ್ ಬಳಿಕ ಪಕ್ಷದ ವಿವಿಧ ಘಟಕಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.