’ಹಾಸಿಗೆ ಇಲ್ಲ ಎಂದು ರೋಗಿಗಳನ್ನು ವಿನಾಕಾರಣ ಕಾಯಿಸುವುದು, ಹೊರ ಕಳುಹಿಸುವುದು, ಒಳರೋಗಿಯಾಗಿ ದಾಖಲಿಸದೇ ಇರುವುದು ಇತ್ಯಾದಿ ದೂರುಗಳು ಬಂದಿವೆ. ಹೀಗಾಗಿ, ಪ್ರತಿ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ‘ಸಹಾಯ ಕೇಂದ್ರ’ ಸ್ಥಾಪಿಸಲಾಗುವುದು. ಒಬ್ಬ ವೈದ್ಯ, ನೋಡಲ್ ಅಧಿಕಾರಿ ಹಾಗು ಸಿಬ್ಬಂದಿ ಇರಲಿದ್ದು, ಬಂದ ರೋಗಿಗಳಿಗೆ ಯಾವುದೇ ಅನಾನುಕೂಲ ಆಗದಂತೆ ನಿಗಾವಹಿಸಲಿದ್ದಾರೆ’ ಎಂದರು.