ಮಾರ್ಚ್ 23ರಂದು, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯ ಪಾದಚಾರಿ ಮಾರ್ಗದಲ್ಲಿ ಹಿರಿಯ ನಾಗರಿಕರೊಬ್ಬರು ನಡೆದಾಡಿಕೊಂಡು ಬ್ಯಾಗ್ ಮಾರಾಟ ಮಾಡುತ್ತಿದ್ದರು. ಅವರು ಅಥವಾ ಅವರು ಮಾರಾಟ ಮಾಡುತ್ತಿದ್ದ ಸಾಮಗ್ರಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರಲಿಲ್ಲ. ಹೀಗಿದ್ದರೂ, ಮಾರ್ಷಲ್ಗಳು ಅವರು ಹಿಡಿದು, ಬ್ಯಾಗ್ ಕಸಿದುಕೊಂಡು ಎಳೆದಾಡಿದ್ದರು. ಪಾದಚಾರಿಯೊಬ್ಬರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾರ್ಷಲ್ಗಳು ಸುಮ್ಮನಾಗಿದ್ದರು.