‘ಮರು ವರ್ಗ: ಡಿಸಿಎಂ ಭರವಸೆ’
‘ಪುನಃ ಎಂಜಿನಿಯರಿಂಗ್ ಸದಸ್ಯ ಹುದ್ದೆಗೆ ವರ್ಗಾವಣೆ ಮಾಡಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ’ ಎಂದು ಶಾಂತರಾಜಣ್ಣ ಹೇಳಿದರು.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಕೆಲಸದಲ್ಲಿ ಮಂದುವರಿಯುವಂತೆ ಅವರು ನೀಡಿರುವ ಸೂಚನೆಯಂತೆ ಸಮಾಲೋಚಕರ ಜತೆ ಸೇರಿಕೊಂಡು ವರದಿ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದೇನೆ’ ಎಂದರು. ಕಾರು ಹಿಂದಿರುಗಿಸದಿರುವ ಬಗ್ಗೆ ಕೇಳಿದಾಗ, ‘ನಿಯಮಗಳ ಪ್ರಕಾರ, ನಾನು ಕಾರನ್ನು ಹಿಂದಿರುಗಿಸಬೇಕಿತ್ತು. ಆದರೆ, ಮತ್ತೆ ಅದೇ ಹುದ್ದೆಗೆ ಮರಳುವ ಭರವಸೆ ಇರುವ ಕಾರಣ ಕಾರನ್ನು ನಾನೇ ಬಳಸುತ್ತಿದ್ದೇನೆ’ ಎಂದು ಹೇಳಿದರು.