<p><strong>ಬೆಂಗಳೂರು:</strong> ತಾಮ್ರವನ್ನು ಹೊರ ತೆಗೆಯುವುದಕ್ಕಾಗಿ ಸೂಕ್ಷ್ಮ ವಲಯದಲ್ಲಿಟೆಲಿಫೋನ್ ಕೇಬಲ್ ಸುಟ್ಟಿರುವುದು ಕೂಡ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದುಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.</p>.<p>ಡಿಸೆಂಬರ್ 6ರಂದು ಬೆಳ್ಳಂದೂರು ಕೆರೆಯ ಹತ್ತಿರ ಕೇಬಲ್ ಸುಟ್ಟು ತಾಮ್ರವನ್ನು ತೆಗೆಯಲು ಯತ್ನಿಸುತ್ತಿರುವ ನಾಲ್ವರು ಆರೋಪಿಗಳನ್ನು ಬಿಬಿಎಂಪಿ ಮಾರ್ಷಲ್ಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಇದು ತಿಳಿದುಬಂದಿದೆ.</p>.<p>ತಮಿಳುನಾಡಿನ ಧರ್ಮಪುರಿ ಮೂಲದಚರಣಪ್ಪ, ಇ.ಪಾಂಡುರಂಗನ್, ಪ್ರಕಾಶ್ ಮತ್ತು ಸೆಂಥಿಲ್ ಸಿಕ್ಕಿಬಿದ್ದ ಆರೋಪಿಗಳು. ಇವರು ಎಚ್ಎಸ್ಆರ್ ಬಡಾವಣೆಯಲ್ಲಿ ವಾಸವಾಗಿದ್ದು, ತಾಮ್ರವನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಗಸ್ತಿನಲ್ಲಿದ್ದಾಗ ನಮಗೆಕೇಬಲ್ ವೈರ್ನ ರಾಶಿಗೆ ಬೆಂಕಿ ಹಚ್ಚಿರುವುದು ಕಂಡಿತು. ಈ ಕೃತ್ಯದಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಅವರಿಂದ 90 ಕೆ.ಜಿ. ತಾಮ್ರವನ್ನು ವಶಪಡಿಸಿಕೊಂಡಿದ್ದೇವೆ. ಬಂಧಿತರು ಪ್ರತಿ ಕೆ.ಜಿ ತಾಮ್ರವನ್ನು₹400ರ ದರದಲ್ಲಿ ಮಾರಾಟ ಮಾಡುತ್ತಿದ್ದರು. ಈಗಾಗಲೇ ಎಚ್ಎಸ್ಆರ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎನ್ನುತ್ತಾರೆ ಮಾರ್ಷಲ್ಸೂಪರಿಂಟೆಂಡೆಂಟ್ ವೆಸ್ಲಿ ಫರ್ನಾಂಡಿಸ್.</p>.<p>‘ಆರೋಪಿಗಳು ಕೆರೆಯ ಸೂಕ್ಷ್ಮ ವಲಯದಲ್ಲಿ ಕೇಬಲ್ ಸುಟ್ಟಿರುವುದು ಕೆರೆ ಮಾಲಿನ್ಯಗೊಳ್ಳಲು ಕಾರಣ. ಆದ್ದರಿಂದ ನಾವು ಕೆರೆಯ ಸುತ್ತ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇವೆ’ ಎಂದು ಹೇಳುತ್ತಾರೆ ಬಿಬಿಎಂಪಿ ಜಂಟಿ ಆಯುಕ್ತಸರ್ಫಾರಾಜ್ ಖಾನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತಾಮ್ರವನ್ನು ಹೊರ ತೆಗೆಯುವುದಕ್ಕಾಗಿ ಸೂಕ್ಷ್ಮ ವಲಯದಲ್ಲಿಟೆಲಿಫೋನ್ ಕೇಬಲ್ ಸುಟ್ಟಿರುವುದು ಕೂಡ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದುಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.</p>.<p>ಡಿಸೆಂಬರ್ 6ರಂದು ಬೆಳ್ಳಂದೂರು ಕೆರೆಯ ಹತ್ತಿರ ಕೇಬಲ್ ಸುಟ್ಟು ತಾಮ್ರವನ್ನು ತೆಗೆಯಲು ಯತ್ನಿಸುತ್ತಿರುವ ನಾಲ್ವರು ಆರೋಪಿಗಳನ್ನು ಬಿಬಿಎಂಪಿ ಮಾರ್ಷಲ್ಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಇದು ತಿಳಿದುಬಂದಿದೆ.</p>.<p>ತಮಿಳುನಾಡಿನ ಧರ್ಮಪುರಿ ಮೂಲದಚರಣಪ್ಪ, ಇ.ಪಾಂಡುರಂಗನ್, ಪ್ರಕಾಶ್ ಮತ್ತು ಸೆಂಥಿಲ್ ಸಿಕ್ಕಿಬಿದ್ದ ಆರೋಪಿಗಳು. ಇವರು ಎಚ್ಎಸ್ಆರ್ ಬಡಾವಣೆಯಲ್ಲಿ ವಾಸವಾಗಿದ್ದು, ತಾಮ್ರವನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಗಸ್ತಿನಲ್ಲಿದ್ದಾಗ ನಮಗೆಕೇಬಲ್ ವೈರ್ನ ರಾಶಿಗೆ ಬೆಂಕಿ ಹಚ್ಚಿರುವುದು ಕಂಡಿತು. ಈ ಕೃತ್ಯದಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಅವರಿಂದ 90 ಕೆ.ಜಿ. ತಾಮ್ರವನ್ನು ವಶಪಡಿಸಿಕೊಂಡಿದ್ದೇವೆ. ಬಂಧಿತರು ಪ್ರತಿ ಕೆ.ಜಿ ತಾಮ್ರವನ್ನು₹400ರ ದರದಲ್ಲಿ ಮಾರಾಟ ಮಾಡುತ್ತಿದ್ದರು. ಈಗಾಗಲೇ ಎಚ್ಎಸ್ಆರ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎನ್ನುತ್ತಾರೆ ಮಾರ್ಷಲ್ಸೂಪರಿಂಟೆಂಡೆಂಟ್ ವೆಸ್ಲಿ ಫರ್ನಾಂಡಿಸ್.</p>.<p>‘ಆರೋಪಿಗಳು ಕೆರೆಯ ಸೂಕ್ಷ್ಮ ವಲಯದಲ್ಲಿ ಕೇಬಲ್ ಸುಟ್ಟಿರುವುದು ಕೆರೆ ಮಾಲಿನ್ಯಗೊಳ್ಳಲು ಕಾರಣ. ಆದ್ದರಿಂದ ನಾವು ಕೆರೆಯ ಸುತ್ತ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇವೆ’ ಎಂದು ಹೇಳುತ್ತಾರೆ ಬಿಬಿಎಂಪಿ ಜಂಟಿ ಆಯುಕ್ತಸರ್ಫಾರಾಜ್ ಖಾನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>