‘ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಗಣೇಶ್, 2020ರಲ್ಲಿ ಕೋವಿಡ್ ವೇಳೆ ತಮ್ಮ ಮನೆ ಬಳಿ ಬಡವರಿಗೆ ಹಾಲು ಹಂಚುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರದ್ದೇ ಇನ್ನೊಂದು ಗುಂಪು ಸಹ ಅದೇ ಸ್ಥಳದಲ್ಲಿ ಹಾಲು ವಿತರಿಸುತ್ತಿತ್ತು. ಹಾಲು ಹಂಚಿಕೆ ಸಂಬಂಧ ಪರಸ್ಪರ ಗಲಾಟೆ ನಡೆದಿತ್ತು. ಈ ಗಲಾಟೆಯಿಂದ ವೈಷಮ್ಯ ಬೆಳೆದಿತ್ತು. ಹೀಗಾಗಿ, ಗಣೇಶ್ ಅವರನ್ನು ಕೊಲೆ ಮಾಡಲು ಎದುರಾಳಿ ತಂಡ ಸಂಚು ರೂಪಿಸಿತ್ತು’ ಎಂದು ಮೂಲಗಳು ತಿಳಿಸಿವೆ.