ಸಂಗೀತ ಕಛೇರಿ
ಬೆಂಗಳೂರು: ಗುರುರಾವ್ ದೇಶಪಾಂಡೆ ಸಂಗೀತ ಸಭಾ ಇದೇ 28ರಂದು ರಾತ್ರಿ 9 ಗಂಟೆಯಿಂದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿಯಿಡೀ ಸಂಗೀತ ಮಹೋತ್ಸವ ಹಮ್ಮಿಕೊಂಡಿದೆ. ಗುರುರಾವ್ ದೇಶಪಾಂಡೆ ಹಾಗೂ ಭೀಮಸೇನ ಜೋಶಿ ದತ್ತಿ ಸಂಗೀತ ಮಹೋತ್ಸವ ಇದಾಗಿದೆ. ಯೋಗೇಶ್ ಸಂಸಿ, ವಿನಾಯಕ ತೊರವಿ, ರುಚಿರ ಕೇದಾರ್, ಇಂದ್ರಯುದ್ಧ್ ಮಜುಂದಾರ್ ಹಾಗೂ ದತ್ತಾತ್ರೇಯ ವೇಲಂಕರ್ ಭಾಗವಹಿಸುತ್ತಾರೆ. ಪ್ರವೇಶ ಉಚಿತ.