ಗುರುವಾರ, 26 ಫೆಬ್ರುವರಿ 2026
×
ADVERTISEMENT

ಬೆಂಗಳೂರು | ಸಾಂಸ್ಕೃತಿಕ ಮುನ್ನೋಟ: ‘ಕಲಾ ಸ್ಪಂದನ’ ಸಂಗೀತ–ನೃತ್ಯ

Published : 25 ಫೆಬ್ರುವರಿ 2026, 23:30 IST
Last Updated : 25 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
‘ಒಮ್ಮೆ ಹೆಣ್ಣಾಗು’ ನಾಟಕ
ಬೆಂಗಳೂರು: ಕೋರಮಂಗಲದಲ್ಲಿರುವ ಇಂಡಿಯನ್ ಹೆರಿಟೇಜ್ ಅಕಾಡೆಮಿ ಇದೇ 27ರಂದು ಸಂಜೆ 6.30ಕ್ಕೆ ತನ್ನ ಕೇಂದ್ರದಲ್ಲಿ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ರಂಗಾಯಣ ಮೈಸೂರು ಹಾಗೂ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಲೇಖಕಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಸಂಕಲನದ ಆಯ್ದ ಕಥೆಗಳನ್ನು ಆಧರಿಸಿದ ನಾಟಕ ಇದಾಗಿದ್ದು, ಸವಿತಾ ರಾಣಿ ನಿರ್ದೇಶಿಸಿದ್ದಾರೆ. ಪ್ರವೇಶ ಉಚಿತ ಇರಲಿದೆ.
ಸಂಗೀತ ಕಛೇರಿ
ಬೆಂಗಳೂರು: ಗುರುರಾವ್ ದೇಶಪಾಂಡೆ ಸಂಗೀತ ಸಭಾ ಇದೇ 28ರಂದು ರಾತ್ರಿ 9 ಗಂಟೆಯಿಂದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿಯಿಡೀ ಸಂಗೀತ ಮಹೋತ್ಸವ ಹಮ್ಮಿಕೊಂಡಿದೆ. ಗುರುರಾವ್ ದೇಶಪಾಂಡೆ ಹಾಗೂ ಭೀಮಸೇನ ಜೋಶಿ ದತ್ತಿ ಸಂಗೀತ ಮಹೋತ್ಸವ ಇದಾಗಿದೆ. ಯೋಗೇಶ್ ಸಂಸಿ, ವಿನಾಯಕ ತೊರವಿ, ರುಚಿರ ಕೇದಾರ್, ಇಂದ್ರಯುದ್ಧ್ ಮಜುಂದಾರ್ ಹಾಗೂ ದತ್ತಾತ್ರೇಯ ವೇಲಂಕರ್ ಭಾಗವಹಿಸುತ್ತಾರೆ. ಪ್ರವೇಶ ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT