ಹುಸ್ಕೂರು ಗ್ರಾಮದಲ್ಲಿರುವ 2.22 ಎಕರೆ ನೆಡುತೋಪಿನಲ್ಲಿ ಸ್ಥಳೀಯ ಯುವಕರು ವಿವಿಧ ಜಾತಿಯ 130ಕ್ಕೂ ಹೆಚ್ಚು ಗಿಡ–ಮರಗಳನ್ನು ಬೆಳೆಸಿದ್ದಾರೆ. ನೆಡುತೋಪಿನ ಅಭಿವೃದ್ಧಿಗೆ ₹2 ಲಕ್ಷ ಖರ್ಚು ಮಾಡಿದ್ದಾರೆ. ಆದರೆ ಗ್ರಾಮದ ಕೆಲವರ ಒತ್ತಡದ ಮೇರೆಗೆ ಶಾಸಕರು, ಜಿಲ್ಲಾಧಿಕಾರಿಗಳು ನೆಡುತೋಪನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿರುವುದು ಖಂಡನೀಯ ಎಂದು ಗ್ರಾಮದ ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.