ಈ ಪ್ರವಾಸಿ ನಡಿಗೆಯಿಂದ ಆದಾಯ ಗಳಿಸುವುದು ಇಲಾಖೆಯ ಉದ್ದೇಶವಲ್ಲ. ಸಾರ್ವಜನಿಕರಿಗೆ ಗಿಡ–ಮರಗಳು ಜೀವವೈವಿಧ್ಯಗಳನ್ನು ಸಂರಕ್ಷಿಸುವುದರ ಜೊತೆಗೆ ಯುವಸಮೂಹದಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದಾಗಿದೆ
ಎಂ. ಜಗದೀಶ್ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಕಬ್ಬನ್ ಉದ್ಯಾನದಲ್ಲಿ ಖಾಸಗಿಯವರು ಪ್ರವಾಸಿ ನಡಿಗೆಗಳನ್ನು ಆಯೋಜಿಸುತ್ತಿದ್ದರು. ಈಗ ತೋಟಗಾರಿಕೆ ಇಲಾಖೆಯಿಂದ ಅಧಿಕೃತವಾಗಿ ಪ್ರವಾಸಿ ನಡಿಗೆಗೆ ಚಾಲನೆ ನೀಡಲಾಗುತ್ತಿದೆ. ಸಂದರ್ಶಕರಿಗೆ ಖಚಿತ ಮಾಹಿತಿ ಒದಗಿಸಲು ಇದು ಸಹಾಯಕವಾಗಲಿದೆ
ಜಿ. ಕುಸುಮಾ ತೋಟಗಾರಿಕೆ ಇಲಾಖೆ ನಿರ್ದೇಶಕಿ (ಕಬ್ಬನ್ ಉದ್ಯಾನ)