<p><strong>ಬೆಂಗಳೂರು: </strong>ವಾರದಿಂದ ತರಕಾರಿ, ಹಣ್ಣಿನ ಬೆಲೆಗಳು ಸ್ಥಿರವಾಗಿವೆ. ಮುಂದಿನ ವಾರದಲ್ಲಿ ಹೆಚ್ಚು ಮಳೆಯಾದರೆ ತರಕಾರಿ ದರಗಳು ಏರಲಿವೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಲಾಕ್ಡೌನ್ ಜಾರಿಯಾದ ಬಳಿಕ ಎಲ್ಲ ತರಕಾರಿಗಳ ದರ ನೆಲಕಚ್ಚಿದ್ದವು. ಈಗ ಲಾಕ್ಡೌನ್ ಸಡಿಲಗೊಂಡರೂ ಮಾರುಕಟ್ಟೆ ಚಟುವಟಿಕೆ ಮಂದಗತಿಯಲ್ಲೇ ಸಾಗಿದೆ.</p>.<p>'ವಾಡಿಕೆಯಂತೆ ರಾಜ್ಯದಲ್ಲಿ ಮಳೆ ಸುರಿದಿದ್ದರೆ, ಈ ವೇಳೆಗೆ ಹಣ್ಣು, ತರಕಾರಿಗಳ ಬೆಲೆ ಏರುತ್ತಿತ್ತು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚೇನೂ ಮಳೆಯಾಗಿಲ್ಲ. ಇದರಿಂದ ರೈತರು ಬೆಳೆದ ತರಕಾರಿಗಳು ಎಂದಿನಂತೆ ಮಾರುಕಟ್ಟೆಗೆ ಆವಕವಾಗಿವೆ. ಹೆಚ್ಚು ಕಾರ್ಯಕ್ರಮಗಳು ನಡೆಯದೆ ಇರುವುದರಿಂದ ಬೇಡಿಕೆಯೂ ಇಲ್ಲ' ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ-ಸೊಪ್ಪು ಸಗಟು ವ್ಯಾಪಾರಿ ಕುಮಾರ್ ತಿಳಿಸಿದರು.</p>.<p>'ಹೋಟೆಲ್ಗಳನ್ನು ತೆರೆಯಲು ಈ ವಾರದಲ್ಲಿ ಅನುಮತಿ ಸಿಗಲಿದೆ ಹಾಗೂ ಮಳೆಯೂ ಹೆಚ್ಚಾಗಲಿದೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿದ್ದು, ದರಗಳೂ ಏರಲಿವೆ' ಎಂದರು.</p>.<p class="Subhead">ಸೊಪ್ಪಿನ ದರ ಏರಿಕೆ: ಕಳೆದ ವಾರ ಪ್ರತಿ ಕಟ್ಟಿಗೆ ₹30ರಷ್ಟಿದ್ದ ಕೊತ್ತಂಬರಿ ದರ ಈಗ ₹35ಕ್ಕೇರಿದೆ. ಮೆಂತ್ಯೆ ಮತ್ತು ಸಬ್ಬಕ್ಕಿ ಸೊಪ್ಪು ₹15, ಪಾಲಕ್ ₹10, ದಂಟು ₹8 ಹಾಗೂ ಅರಿವೆ ಸೊಪ್ಪು ₹6ರಂತೆ ಮಾರಾಟ ಆಗುತ್ತಿದೆ. ಎಲ್ಲ ಸೊಪ್ಪಿನ ದರಗಳು ಕನಿಷ್ಠ ₹2 ಏರಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಾರದಿಂದ ತರಕಾರಿ, ಹಣ್ಣಿನ ಬೆಲೆಗಳು ಸ್ಥಿರವಾಗಿವೆ. ಮುಂದಿನ ವಾರದಲ್ಲಿ ಹೆಚ್ಚು ಮಳೆಯಾದರೆ ತರಕಾರಿ ದರಗಳು ಏರಲಿವೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಲಾಕ್ಡೌನ್ ಜಾರಿಯಾದ ಬಳಿಕ ಎಲ್ಲ ತರಕಾರಿಗಳ ದರ ನೆಲಕಚ್ಚಿದ್ದವು. ಈಗ ಲಾಕ್ಡೌನ್ ಸಡಿಲಗೊಂಡರೂ ಮಾರುಕಟ್ಟೆ ಚಟುವಟಿಕೆ ಮಂದಗತಿಯಲ್ಲೇ ಸಾಗಿದೆ.</p>.<p>'ವಾಡಿಕೆಯಂತೆ ರಾಜ್ಯದಲ್ಲಿ ಮಳೆ ಸುರಿದಿದ್ದರೆ, ಈ ವೇಳೆಗೆ ಹಣ್ಣು, ತರಕಾರಿಗಳ ಬೆಲೆ ಏರುತ್ತಿತ್ತು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚೇನೂ ಮಳೆಯಾಗಿಲ್ಲ. ಇದರಿಂದ ರೈತರು ಬೆಳೆದ ತರಕಾರಿಗಳು ಎಂದಿನಂತೆ ಮಾರುಕಟ್ಟೆಗೆ ಆವಕವಾಗಿವೆ. ಹೆಚ್ಚು ಕಾರ್ಯಕ್ರಮಗಳು ನಡೆಯದೆ ಇರುವುದರಿಂದ ಬೇಡಿಕೆಯೂ ಇಲ್ಲ' ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ-ಸೊಪ್ಪು ಸಗಟು ವ್ಯಾಪಾರಿ ಕುಮಾರ್ ತಿಳಿಸಿದರು.</p>.<p>'ಹೋಟೆಲ್ಗಳನ್ನು ತೆರೆಯಲು ಈ ವಾರದಲ್ಲಿ ಅನುಮತಿ ಸಿಗಲಿದೆ ಹಾಗೂ ಮಳೆಯೂ ಹೆಚ್ಚಾಗಲಿದೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿದ್ದು, ದರಗಳೂ ಏರಲಿವೆ' ಎಂದರು.</p>.<p class="Subhead">ಸೊಪ್ಪಿನ ದರ ಏರಿಕೆ: ಕಳೆದ ವಾರ ಪ್ರತಿ ಕಟ್ಟಿಗೆ ₹30ರಷ್ಟಿದ್ದ ಕೊತ್ತಂಬರಿ ದರ ಈಗ ₹35ಕ್ಕೇರಿದೆ. ಮೆಂತ್ಯೆ ಮತ್ತು ಸಬ್ಬಕ್ಕಿ ಸೊಪ್ಪು ₹15, ಪಾಲಕ್ ₹10, ದಂಟು ₹8 ಹಾಗೂ ಅರಿವೆ ಸೊಪ್ಪು ₹6ರಂತೆ ಮಾರಾಟ ಆಗುತ್ತಿದೆ. ಎಲ್ಲ ಸೊಪ್ಪಿನ ದರಗಳು ಕನಿಷ್ಠ ₹2 ಏರಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>