‘ಬಿಎಂಆರ್ಸಿಎಲ್ನಲ್ಲಿ ದುಂದು ವೆಚ್ಚ ಕಡಿಮೆ ಮಾಡಿದರೆ ಸಾಕು ಪ್ರಯಾಣದರ ಹೆಚ್ಚಳ ಮಾಡಬೇಕಿಲ್ಲ. ಮಾತ್ರವಲ್ಲ. ಈಗಿರುವ ದರವನ್ನೂ ಕಡಿಮೆ ಮಾಡಬಹುದು’ ಎಂದು ಬಿಎಂಆರ್ಸಿಎಲ್ ನೌಕರರ ಯೂನಿಯನ್ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದರು. ‘₹3 ಲಕ್ಷ ವೇತನವಿದ್ದ ಒಬ್ಬ ಅಧಿಕಾರಿ ತನ್ನ ವೇತನವನ್ನು ₹1.50 ಲಕ್ಷಕ್ಕೂ ಹೆಚ್ಚು ಏರಿಕೆ ಮಾಡಿಸಿಕೊಂಡಿದ್ದಾರೆ. ಇದೇ ರೀತಿ ಕೆಲವು ಅಧಿಕಾರಿಗಳು ವೇತನ ವಿಪರೀತ ಹೆಚ್ಚಳ ಮಾಡಿಕೊಂಡಿದ್ದಾರೆ. ಲೋಕೊ ಪೈಲಟ್, ಎಂಜಿನಿಯರ್ ಸಹಿತ ದುಡಿಯುವ ವರ್ಗಕ್ಕೆ ಈ ರೀತಿ ಹೆಚ್ಚಳ ಮಾಡುತ್ತಿಲ್ಲ. ಬೇರೆ ಬೇರೆ ಇಲಾಖೆಗಳಲ್ಲಿ ನಿವೃತ್ತರಾದ ಸುಮಾರು 300 ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ₹10 ಕೋಟಿಯವಷ್ಟು ದುಂದುವೆಚ್ಚ ಮಾಡಲಾಗುತ್ತಿದೆ. ಇದನ್ನೆಲ್ಲ ನಿಯಂತ್ರಿಸುವುದು ಬಿಟ್ಟು ಪ್ರಯಾಣಿಕರ ಮೆಲೆ ಹೊರೆ ಹೊರಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.