<p><strong>ಬೆಂಗಳೂರು</strong>: ‘ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ಸ್ಕಂದಗಿರಿ ತಪ್ಪಲಿನಲ್ಲಿ ಇರುವ ಓಂಕಾರ ಜ್ಯೋತಿ ಮಠ ಟ್ರಸ್ಟ್ನ ಆಸ್ತಿ ಕಬಳಿಸಲು ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಷಡ್ಯಂತ್ರ ನಡೆಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮಠದ ಅಧ್ಯಕ್ಷ ಉಮಾ ಮಹೇಶ್ವರ ಸ್ವಾಮೀಜಿ ಆರೋಪಿಸಿದರು. </p>.<p>ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠದ ಆಸ್ತಿಯನ್ನು ಬಲವಂತವಾಗಿ ಪಡೆಯಲು ಲಕ್ಷ್ಮೀನಾರಾಯಣ ಹಾಗೂ ಇತರರು ಜ. 10ರಂದು ಏಕಾಏಕಿ ಮಠಕ್ಕೆ ನುಗ್ಗಿ, ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ' ಎಂದು ತಿಳಿಸಿದರು.</p>.<p>ಕೊಠಡಿಯಲ್ಲಿ ಕೂಡಿಹಾಕಿ, ಮಠದಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ದೌರ್ಜನ್ಯವೆಸಗಿದ ಹಾಗೂ ಕರ್ತವ್ಯ ನಿರ್ಲಕ್ಷ್ಯ ಮಾಡಿದ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಮಠದ ಆಸ್ತಿ ರಕ್ಷಿಸಬೇಕು ಎಂದು ಒತ್ತಾಯಿಸಿದರು. </p>.<p>'ಮರಿಯಪ್ಪ ಎಂಬುವರು 26 ವರ್ಷಗಳ ಹಿಂದೆ ಇಲ್ಲಿ 2 ಎಕರೆ 12 ಗುಂಟೆ ಜಮೀನು ಖರೀದಿಸಿ ಮಠ ಸ್ಥಾಪಿಸಿದ್ದರು. ಬಳಿಕ ಅವರ ಪತ್ನಿ ಜಯಮ್ಮ ಅವರು ಮಠದ ಹೊಣೆ ಹೊತ್ತುಕೊಂಡರು. ಬಳಿಕ ಇದೇ ತಿಂಗಳ 9 ರಂದು ನನ್ನ ಪಟ್ಟಾಭಿಷೇಕ ಸಮಾರಂಭ ನೆರವೇರಿತು. ನಾನು ಪೀಠಾಧಿಪತಿಯಾಗಿದ್ದು, ಜಯಮ್ಮ ಅವರು ಗೌರವ ಅಧ್ಯಕ್ಷೆಯಾಗಿದ್ದಾರೆ. ಆದರೆ, ನಮ್ಮ ಮೇಲೆ ದಾಳಿ ಮಾಡಿದವರು ಹಿಂದೆಂದೂ ಮಠದ ಬಳಿ ಬಂದಿರಲಿಲ್ಲ. ಇದೀಗ ತಾವು ಜಯಮ್ಮ ಅವರ ರಕ್ತ ಸಂಬಂಧಿ, ಮಠ ತೆರವುಗೊಳಿಸಬೇಕು. ಈ ಜಾಗ ತಮ್ಮದು ಎಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ದೂರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ಸ್ಕಂದಗಿರಿ ತಪ್ಪಲಿನಲ್ಲಿ ಇರುವ ಓಂಕಾರ ಜ್ಯೋತಿ ಮಠ ಟ್ರಸ್ಟ್ನ ಆಸ್ತಿ ಕಬಳಿಸಲು ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಷಡ್ಯಂತ್ರ ನಡೆಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮಠದ ಅಧ್ಯಕ್ಷ ಉಮಾ ಮಹೇಶ್ವರ ಸ್ವಾಮೀಜಿ ಆರೋಪಿಸಿದರು. </p>.<p>ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠದ ಆಸ್ತಿಯನ್ನು ಬಲವಂತವಾಗಿ ಪಡೆಯಲು ಲಕ್ಷ್ಮೀನಾರಾಯಣ ಹಾಗೂ ಇತರರು ಜ. 10ರಂದು ಏಕಾಏಕಿ ಮಠಕ್ಕೆ ನುಗ್ಗಿ, ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ' ಎಂದು ತಿಳಿಸಿದರು.</p>.<p>ಕೊಠಡಿಯಲ್ಲಿ ಕೂಡಿಹಾಕಿ, ಮಠದಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ದೌರ್ಜನ್ಯವೆಸಗಿದ ಹಾಗೂ ಕರ್ತವ್ಯ ನಿರ್ಲಕ್ಷ್ಯ ಮಾಡಿದ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಮಠದ ಆಸ್ತಿ ರಕ್ಷಿಸಬೇಕು ಎಂದು ಒತ್ತಾಯಿಸಿದರು. </p>.<p>'ಮರಿಯಪ್ಪ ಎಂಬುವರು 26 ವರ್ಷಗಳ ಹಿಂದೆ ಇಲ್ಲಿ 2 ಎಕರೆ 12 ಗುಂಟೆ ಜಮೀನು ಖರೀದಿಸಿ ಮಠ ಸ್ಥಾಪಿಸಿದ್ದರು. ಬಳಿಕ ಅವರ ಪತ್ನಿ ಜಯಮ್ಮ ಅವರು ಮಠದ ಹೊಣೆ ಹೊತ್ತುಕೊಂಡರು. ಬಳಿಕ ಇದೇ ತಿಂಗಳ 9 ರಂದು ನನ್ನ ಪಟ್ಟಾಭಿಷೇಕ ಸಮಾರಂಭ ನೆರವೇರಿತು. ನಾನು ಪೀಠಾಧಿಪತಿಯಾಗಿದ್ದು, ಜಯಮ್ಮ ಅವರು ಗೌರವ ಅಧ್ಯಕ್ಷೆಯಾಗಿದ್ದಾರೆ. ಆದರೆ, ನಮ್ಮ ಮೇಲೆ ದಾಳಿ ಮಾಡಿದವರು ಹಿಂದೆಂದೂ ಮಠದ ಬಳಿ ಬಂದಿರಲಿಲ್ಲ. ಇದೀಗ ತಾವು ಜಯಮ್ಮ ಅವರ ರಕ್ತ ಸಂಬಂಧಿ, ಮಠ ತೆರವುಗೊಳಿಸಬೇಕು. ಈ ಜಾಗ ತಮ್ಮದು ಎಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ದೂರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>