<p><strong>ಬೆಂಗಳೂರು</strong>: ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ ‘ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ’ಕ್ಕೆ ಅಮ್ಮಸಂದ್ರ ಸುರೇಶ್ ಅವರ ‘ಅಗ್ನಿಕುಂಡದಿಂದ ಬಂದ ಚೇತನ’ ಕಾದಂಬರಿ ಆಯ್ಕೆಯಾಗಿದೆ.</p><p>ಈ ಬಹುಮಾನವು ₹3 ಸಾವಿರ ನಗದು ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ. ಇದೇ 23ರಂದು ಪ್ರತಿಷ್ಠಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ<br>ವಿತರಣೆ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ಅವರು<br>ತಿಳಿಸಿದ್ದಾರೆ.</p>.<p><strong>ಕುವೆಂಪು ಚಿರಂತನ’ ಪ್ರಶಸ್ತಿಗೆ ಪುಸ್ತಕ ಆಹ್ವಾನ</strong></p><p>ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯು ‘ಕುವೆಂಪು ಚಿರಂತನ ಪ್ರಶಸ್ತಿ’ಗೆ 2025ರಲ್ಲಿ ಪ್ರಕಟ<br>ಗೊಂಡ ಕೃತಿಗಳನ್ನು ಆಹ್ವಾನಿಸಿದೆ.</p><p>ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ. ‘ವೈಚಾರಿಕತೆ’ಗೆ ಒತ್ತುಕೊಟ್ಟ ಕಥೆ, ಕಾದಂಬರಿ, ನಾಟಕ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿನ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.</p><p>ಕೃತಿಯ ಎರಡು ಪ್ರತಿಗಳನ್ನು ಎ.ಎಸ್.ನಾಗರಾಜಸ್ವಾಮಿ, ಅಧ್ಯಕ್ಷ, ಕನ್ನಡ ಸಂಘರ್ಷ ಸಮಿತಿ, ನಂ.3, 1ನೇ ತಿರುವು, 1ನೇ ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು-560 056 ಈ ವಿಳಾಸಕ್ಕೆ ಜನವರಿ 10ರೊಳಗೆ ಕಳುಹಿಸಬೇಕು ಎಂದು ಪ್ರಕಟಣೆತಿಳಿಸಿದೆ.</p><p>ಸಂಪರ್ಕಕ್ಕೆ: 9739001410</p>.<p><strong>ಬೆಂಗಳೂರು ವಿ.ವಿ: ಕೊನೆಯ ದಿನಾಂಕ ವಿಸ್ತರಣೆ</strong></p><p><strong>ಬೆಂಗಳೂರು</strong>: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು 2026-27ನೇ ಶೈಕ್ಷಣಿಕ ಸಾಲಿಗೆ ವಿವಿಧ ರೀತಿಯ ಸಂಯೋಜನಾ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.</p><p>ದಂಡರಹಿತವಾಗಿ ಇದೇ 15ರವರೆಗೆ ಮತ್ತು ₹1000 ದಂಡ ಶುಲ್ಕ<br>ದೊಂದಿಗೆ ಇದೇ 18ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಕ್ರಿಸ್ಮಸ್ ಬಜಾರ್ 12ರಿಂದ</strong></p><p>ಬೆಂಗಳೂರು: ಕ್ರಿಸ್ಮಸ್ ಹಬ್ಬದ ಅಂಗವಾಗಿ ವೀ ಕ್ಯಾನ್ ಸಂಘದಿಂದ ಇದೇ 12<br>ಮತ್ತು 13ರಂದು ಬ್ರಿಗೇಡ್ ರಸ್ತೆ ಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಚರ್ಚ್ನಲ್ಲಿ ಕ್ರಿಸ್ಮಸ್<br>ಬಜಾರ್ ಆಯೋಜಿಸಲಾಗುತ್ತಿದೆ.</p><p>ಮಹಿಳಾ ಉದ್ಯಮಿಗಳು ತಯಾರಿಸಿದ ಎಕ್ಸ್–ಮಾಸ್, ಟೆರ್ರಾಕೋಟ, ಆಭರಣಗಳು, ಹ್ಯಾಂಡ್<br>ಮೇಡ್ ಸೋಪ್ ಮತ್ತು ಮೊಂಬತ್ತಿಗಳು, ಸೀರೆಗಳು, ಕೇಕ್ ಸೇರಿದಂತೆ ಅನೇಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇರಲಿದೆ ಎಂದು ಪ್ರಕಟಣೆ<br>ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ ‘ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ’ಕ್ಕೆ ಅಮ್ಮಸಂದ್ರ ಸುರೇಶ್ ಅವರ ‘ಅಗ್ನಿಕುಂಡದಿಂದ ಬಂದ ಚೇತನ’ ಕಾದಂಬರಿ ಆಯ್ಕೆಯಾಗಿದೆ.</p><p>ಈ ಬಹುಮಾನವು ₹3 ಸಾವಿರ ನಗದು ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ. ಇದೇ 23ರಂದು ಪ್ರತಿಷ್ಠಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ<br>ವಿತರಣೆ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ಅವರು<br>ತಿಳಿಸಿದ್ದಾರೆ.</p>.<p><strong>ಕುವೆಂಪು ಚಿರಂತನ’ ಪ್ರಶಸ್ತಿಗೆ ಪುಸ್ತಕ ಆಹ್ವಾನ</strong></p><p>ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯು ‘ಕುವೆಂಪು ಚಿರಂತನ ಪ್ರಶಸ್ತಿ’ಗೆ 2025ರಲ್ಲಿ ಪ್ರಕಟ<br>ಗೊಂಡ ಕೃತಿಗಳನ್ನು ಆಹ್ವಾನಿಸಿದೆ.</p><p>ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ. ‘ವೈಚಾರಿಕತೆ’ಗೆ ಒತ್ತುಕೊಟ್ಟ ಕಥೆ, ಕಾದಂಬರಿ, ನಾಟಕ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿನ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.</p><p>ಕೃತಿಯ ಎರಡು ಪ್ರತಿಗಳನ್ನು ಎ.ಎಸ್.ನಾಗರಾಜಸ್ವಾಮಿ, ಅಧ್ಯಕ್ಷ, ಕನ್ನಡ ಸಂಘರ್ಷ ಸಮಿತಿ, ನಂ.3, 1ನೇ ತಿರುವು, 1ನೇ ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ಬಡಾವಣೆ, ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು-560 056 ಈ ವಿಳಾಸಕ್ಕೆ ಜನವರಿ 10ರೊಳಗೆ ಕಳುಹಿಸಬೇಕು ಎಂದು ಪ್ರಕಟಣೆತಿಳಿಸಿದೆ.</p><p>ಸಂಪರ್ಕಕ್ಕೆ: 9739001410</p>.<p><strong>ಬೆಂಗಳೂರು ವಿ.ವಿ: ಕೊನೆಯ ದಿನಾಂಕ ವಿಸ್ತರಣೆ</strong></p><p><strong>ಬೆಂಗಳೂರು</strong>: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು 2026-27ನೇ ಶೈಕ್ಷಣಿಕ ಸಾಲಿಗೆ ವಿವಿಧ ರೀತಿಯ ಸಂಯೋಜನಾ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.</p><p>ದಂಡರಹಿತವಾಗಿ ಇದೇ 15ರವರೆಗೆ ಮತ್ತು ₹1000 ದಂಡ ಶುಲ್ಕ<br>ದೊಂದಿಗೆ ಇದೇ 18ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಕ್ರಿಸ್ಮಸ್ ಬಜಾರ್ 12ರಿಂದ</strong></p><p>ಬೆಂಗಳೂರು: ಕ್ರಿಸ್ಮಸ್ ಹಬ್ಬದ ಅಂಗವಾಗಿ ವೀ ಕ್ಯಾನ್ ಸಂಘದಿಂದ ಇದೇ 12<br>ಮತ್ತು 13ರಂದು ಬ್ರಿಗೇಡ್ ರಸ್ತೆ ಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಚರ್ಚ್ನಲ್ಲಿ ಕ್ರಿಸ್ಮಸ್<br>ಬಜಾರ್ ಆಯೋಜಿಸಲಾಗುತ್ತಿದೆ.</p><p>ಮಹಿಳಾ ಉದ್ಯಮಿಗಳು ತಯಾರಿಸಿದ ಎಕ್ಸ್–ಮಾಸ್, ಟೆರ್ರಾಕೋಟ, ಆಭರಣಗಳು, ಹ್ಯಾಂಡ್<br>ಮೇಡ್ ಸೋಪ್ ಮತ್ತು ಮೊಂಬತ್ತಿಗಳು, ಸೀರೆಗಳು, ಕೇಕ್ ಸೇರಿದಂತೆ ಅನೇಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇರಲಿದೆ ಎಂದು ಪ್ರಕಟಣೆ<br>ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>