ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ಬೆಂಗಳೂರು | ‘ಲೆಫ್ಟ್‌ ಫ್ರೀ’ಯಾದರೆ ದಟ್ಟಣೆ ನಿಯಂತ್ರಣ: ಇನ್ಫ್ರಾ ಕೈಜೆನ್ ವರದಿ

ಸಿಗ್ನಲ್‌ಗಳನ್ನು ಪ್ರದಕ್ಷಿಣಾಕಾರವಾಗಿ ಮಾಡಿದರೆ ಶೇ 20ರಷ್ಟು ಸಮಸ್ಯೆ ಕಡಿಮೆ
Published : 22 ಫೆಬ್ರುವರಿ 2026, 23:36 IST
Last Updated : 22 ಫೆಬ್ರುವರಿ 2026, 23:36 IST
ಫಾಲೋ ಮಾಡಿ
Comments
‘ಸಂಚಾರ ಪೊಲೀಸರಿಗೆ ವಿವರ’
‘ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಎಂ.ಎ. ಸಲೀಂ ಅವರಿಗೆ ಈ ವರದಿಯನ್ನು ಸಲ್ಲಿಸಲಾಗಿದೆ. ನಮ್ಮ ಸಂಚಾರ ಪೊಲೀಸರಿಗೆ ಈ ಬಗ್ಗೆ ವಿವರ ನೀಡಿ. ಅದಕ್ಕಾಗಿ ಒಂದು ದಿನ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರದಕ್ಷಿಣಾಕಾರವಾಗಿ ಸಿಗ್ನಲ್‌ ತೆರೆಯುವ ಬಗ್ಗೆ ಅವರು ಹೇಳಿದ ದಿನ ವಿವರಿಸಲಾಗುವುದು. ಪ್ರಾಯೋಗಿಕವಾಗಿಯೂ ತೋರಿಸಲಾಗುವುದು’ ಎಂದು ಇನ್ಫ್ರಾ ಕೈಜೆನ್ ಸಂಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಕೆ.ಎನ್‌. ತಿಳಿಸಿದರು.
ವೇಣುಗೋಪಾಲ್ ಕೆ.ಎನ್‌.
ವೇಣುಗೋಪಾಲ್ ಕೆ.ಎನ್‌.
ಜಕ್ಕೂರಿನಲ್ಲಿ ಪ್ರಯೋಗ
‘ನಮ್ಮ ವರದಿಯನ್ನು ಸಂಚಾರ ವಿಭಾಗದ ಎಸಿಪಿ (ಯೋಜನೆ) ಅವರಿಗೆ ಸಲ್ಲಿಸಿದ್ದೇವೆ. ಜಕ್ಕೂರು ಸರ್ಕಲ್‌ನಲ್ಲಿ ಪ್ರಾಯೋಗಿಕವಾಗಿ ತೋರಿಸಿ. ಅಲ್ಲಿನ ಪರಿಣಾಮವನ್ನು ನೋಡಿಕೊಂಡು ಉಳಿದ ಸರ್ಕಲ್‌ಗಳಲ್ಲಿ ಪ್ರದಕ್ಷಿಣೆ ಸಿಗ್ನಲಿಂಗ್ ವ್ಯವಸ್ಥೆ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ’ ಎಂದು ಇನ್ಫ್ರಾ ಕೈಜೆನ್ ಅಧ್ಯಕ್ಷ ಶಿವರಾಜಕುಮಾರ್‌ ಕಮ್ಮಾರ್‌ ತಿಳಿಸಿದರು.
ಶಿವರಾಜಕುಮಾರ್‌ ಕಮ್ಮಾರ್‌
ಶಿವರಾಜಕುಮಾರ್‌ ಕಮ್ಮಾರ್‌
‘ಎಂ.ಜಿ. ರಸ್ತೆಯಲ್ಲಿಯೂ ಇದೆ ಸಮಸ್ಯೆ’
ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಇರುವ ಸಿಗ್ನಲ್‌ನಲ್ಲಿಯೂ ಈ ಸಮಸ್ಯೆ ಇದೆ. ಕುಂ‌ಬ್ಳೆ ಸರ್ಕಲ್‌ ಕಡೆಯಿಂದ ಬಂದ ವಾಹನಗಳು ಕಾಮರಾಜ್‌ ರಸ್ತೆ ಕಡೆಗೆ ಟ್ರಿನಿಟಿ ನಿಲ್ದಾಣದ ಕಡೆಗೆ ಹಾಗೂ ಬ್ರಿಗೇಡ್‌ ರಸ್ತೆ ಕಡೆಗೆ ಸಾಗುತ್ತವೆ. ಕೆಂಪು ಸಿಗ್ನಲ್ ಬಂದ ಕೂಡಲೇ ಈ ಮೂರು ಕಡೆ ಸಾಗುವ ವಾಹನಗಳು ನಿಲುಗಡೆಗೊಳ್ಳುತ್ತವೆ. ಆ ನಂತರ ಕಾಮರಾಜ್‌ ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಹಸಿರು ಸೂಚನೆ ಸಿಕ್ಕಿದರೆ ಆ ಕಡೆಯಿಂದ ಬರುವ ವಾಹನಗಳು ಮುಂದಕ್ಕೆ ಸಾಗುವುದರ ಜೊತೆಗೆ ಕುಂಬ್ಳೆ ಸರ್ಕಲ್‌ ಕಡೆಯಿಂದ ಬರುವ ಕಾಮರಾಜ್‌ ರಸ್ತೆ ಕಡೆಗೆ ಕಾಮರಾಜ್‌ ರಸ್ತೆಯಿಂದ ಟ್ರಿನಿಟಿ ರಸ್ತೆ ಕಡೆಗೆ ಟ್ರಿನಿಟಿ ಕಡೆಯಿಂದ ಬ್ರಿಗೇಡ್‌ ಕಡೆಗೆ ಎಡ ತಿರುವು ಪಡೆದು ವಾಹನಗಳು ಸರಾಗವಾಗಿ ಸಾಗಲು ಸಾಧ್ಯ. ಆದರೆ ಇಲ್ಲಿ ಕುಂಬ್ಳೆ ಸರ್ಕಲ್‌ ಕಡೆಯ ವಾಹನಗಳಿಗೆ ಹಸಿರು ಸೂಚನೆ ಸಿಕ್ಕಿದ ಬಳಿಕ ಕಾಮರಾಜ್‌ ರಸ್ತೆ ಕಡೆಯ ವಾಹನಗಳಿಗೆ ಹಸಿರು ಸೂಚನೆ ನೀಡುವ ಬದಲು ಬ್ರಿಗೇಡ್‌ ರಸ್ತೆಯ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಇನ್ಫ್ರಾ ಕೈಜೆನ್ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT