ಆಸ್ಪತ್ರೆಯು 250 ಯಕೃತ್ತು ಕಸಿ ನಡೆಸಿದ ಪ್ರಯುಕ್ತ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ‘ಕಸಿ ಶಸ್ತ್ರಚಿಕಿತ್ಸೆಗೆ ಕೋವಿಡ್ ಅಡ್ಡಿಪಡಿಸಿತ್ತು. ದಾನಿಗಳ ಕೊರತೆ, ಪ್ರಯಾಣದ ನಿರ್ಬಂಧ ಸೇರಿದಂತೆ ವಿವಿಧ ಕಾರಣಗಳಿಂದ ಕೋವಿಡ್ ಮೊದಲೆರಡು ಅಲೆಯಲ್ಲಿ ಕೋವಿಡೇತರ ಕಾಯಿಲೆಗಳ ಚಿಕಿತ್ಸೆ ಸಮಸ್ಯೆಯಾಯಿತು. ಹೆಚ್ಚಿನವರು ಎರಡು ವರ್ಷಗಳಿಂದ ಅಧಿಕ ಸಮಯವನ್ನು ಮನೆಯಲ್ಲಿಯೇ ಕಳೆದಿದ್ದಾರೆ. ಕೆಲವರು ಅತಿಯಾಗಿ ಮದ್ಯಪಾನ ಮಾಡಿದ್ದಾರೆ. ಆಹಾರ ಸೇವನೆಯಲ್ಲಿಯೂ ವ್ಯತ್ಯಯವಾಗಿದೆ. ಇದರಿಂದಾಗಿ ನಗರದಲ್ಲಿ ಯಕೃತ್ತು ಸಂಬಂಧಿತ ಅನಾರೋಗ್ಯ ಸಮಸ್ಯೆ ಹೆಚ್ಚಳವಾಗಿದೆ’ ಎಂದು ಹೇಳಿದರು.