ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ತೆರಳುತ್ತಿದ್ದ ನವೀನ್ಕುಮಾರ್, ಏಕಾಏಕಿ ವಾಹನವನ್ನು ಎಡಕ್ಕೆ ತಿರುಗಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಜಯ್ (11) ಹಾಗೂ ಶಿವಲೀಲಾ (47) ಅವರು ಮೃತಪಟ್ಟಿದ್ದರು. ಸರಸ್ವತಮ್ಮ (45), ಪಾರ್ಥ (12) ಹಾಗೂ ಅಭಿಲಾಷ್ (12) ಅವರು ಗಾಯಗೊಂಡಿದ್ದರು.