<p><strong>ಬೆಂಗಳೂರು: ‘</strong>ಮೈಸೂರು ದಸರಾ ಉದ್ಘಾಟಿಸಲಿರುವ ಸಾಹಿತಿ ಬಾನು ಮುಷ್ತಾಕ್ ಅವರಿಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ ವಿರೋಧ ಪಕ್ಷಗಳು ಮತ ಆಧರಿತ ರಾಜಕೀಯಕ್ಕೆ ಒತ್ತು ನೀಡಿವೆ’ ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಟೀಕಿಸಿದ್ದಾರೆ.</p>.<p>ಬಿಜೆಪಿಯ ನಾಯಕರು, ಕೇಂದ್ರ ಸಚಿವರು ಕೂಡ ವಿಭಿನ್ನವಾಗಿ ಹೇಳಿಕೆ ನೀಡಿದ್ದಾರೆ. ಚಾಮುಂಡಿಬೆಟ್ಟ ಹಿಂದೂಗಳಿಗೆ ಸೀಮಿತವಾದದು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಹಿಂದೂ ಧರ್ಮ, ಹಿಂದೂ, ಮುಸ್ಲಿಂ ಮತಗಳ ಕುರಿತು ಮಾತನಾಡಿರುವುದರ ಹಿಂದೆ ರಾಜಕೀಯ ಇದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p>ಬಿಜೆಪಿಯವರು ಹೆಚ್ಚು ಗೌರವಿಸುವ ಸ್ವಾಮಿ ವಿವೇಕಾನಂದರು, ‘ಎಲ್ಲಾ ಧರ್ಮಗಳನ್ನು ನಾನು ಸ್ವೀಕರಿಸುತ್ತೇನೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮಗಳೆರಡೂ ಮಿಲನವಾಗಬೇಕು ಎನ್ನುವ ಮಾತುಗಳನ್ನಾಡಿದ್ದರು. ಈ ವಿಚಾರದಲ್ಲಿ ವಿವೇಕಾನಂದರ ಹೇಳಿಕೆಗಳನ್ನು ಆ ಪಕ್ಷದ ನಾಯಕರು ಗಮನಿಸಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.</p>.<p>‘ಮತಮೌಢ್ಯದಿಂದ ದೂರವಿದ್ದು ನಾವೆಲ್ಲ ಸಮಾನತೆಯ ಭಾವ ಉಳಿಸಿಕೊಳ್ಳುವ ಕುರಿತು ಕುವೆಂಪು ಅವರು ಬಹಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದಾರೆ. ಅನಗತ್ಯ ವಿವಾದಗಳಿಂದ ದೂರವಿದ್ದು, ರಾಜ್ಯದ ಬಹುಪಾಲು ಜನರು ಬಯಸುವ ಶಾಂತಿ, ಸಹಬಾಳ್ವೆಗೆ ತೊಂದರೆಯಾಗದಂತೆ ರಾಜಕೀಯ ನಾಯಕರು ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಮೈಸೂರು ದಸರಾ ಉದ್ಘಾಟಿಸಲಿರುವ ಸಾಹಿತಿ ಬಾನು ಮುಷ್ತಾಕ್ ಅವರಿಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ ವಿರೋಧ ಪಕ್ಷಗಳು ಮತ ಆಧರಿತ ರಾಜಕೀಯಕ್ಕೆ ಒತ್ತು ನೀಡಿವೆ’ ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಟೀಕಿಸಿದ್ದಾರೆ.</p>.<p>ಬಿಜೆಪಿಯ ನಾಯಕರು, ಕೇಂದ್ರ ಸಚಿವರು ಕೂಡ ವಿಭಿನ್ನವಾಗಿ ಹೇಳಿಕೆ ನೀಡಿದ್ದಾರೆ. ಚಾಮುಂಡಿಬೆಟ್ಟ ಹಿಂದೂಗಳಿಗೆ ಸೀಮಿತವಾದದು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಹಿಂದೂ ಧರ್ಮ, ಹಿಂದೂ, ಮುಸ್ಲಿಂ ಮತಗಳ ಕುರಿತು ಮಾತನಾಡಿರುವುದರ ಹಿಂದೆ ರಾಜಕೀಯ ಇದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p>ಬಿಜೆಪಿಯವರು ಹೆಚ್ಚು ಗೌರವಿಸುವ ಸ್ವಾಮಿ ವಿವೇಕಾನಂದರು, ‘ಎಲ್ಲಾ ಧರ್ಮಗಳನ್ನು ನಾನು ಸ್ವೀಕರಿಸುತ್ತೇನೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮಗಳೆರಡೂ ಮಿಲನವಾಗಬೇಕು ಎನ್ನುವ ಮಾತುಗಳನ್ನಾಡಿದ್ದರು. ಈ ವಿಚಾರದಲ್ಲಿ ವಿವೇಕಾನಂದರ ಹೇಳಿಕೆಗಳನ್ನು ಆ ಪಕ್ಷದ ನಾಯಕರು ಗಮನಿಸಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.</p>.<p>‘ಮತಮೌಢ್ಯದಿಂದ ದೂರವಿದ್ದು ನಾವೆಲ್ಲ ಸಮಾನತೆಯ ಭಾವ ಉಳಿಸಿಕೊಳ್ಳುವ ಕುರಿತು ಕುವೆಂಪು ಅವರು ಬಹಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದಾರೆ. ಅನಗತ್ಯ ವಿವಾದಗಳಿಂದ ದೂರವಿದ್ದು, ರಾಜ್ಯದ ಬಹುಪಾಲು ಜನರು ಬಯಸುವ ಶಾಂತಿ, ಸಹಬಾಳ್ವೆಗೆ ತೊಂದರೆಯಾಗದಂತೆ ರಾಜಕೀಯ ನಾಯಕರು ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>