ಬೆಂಗಳೂರು: ‘ಪಶ್ಚಿಮ ಬಂಗಾಳದಲ್ಲಿವಿಧಾನಸಭಾ ಚುನಾವಣೆಗಳ ನಂತರ 7,300ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ನಡೆದಿವೆ. ಘಟನೆಯಲ್ಲಿ ಹಲವು ಅಮಾಯಕರು ಬಲಿಯಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಆರೋಪಿಸಿದರು.
‘ಚುನಾವಣೆ ನಂತರ ಬಂಗಾಳದ ಪರಿಸ್ಥಿತಿ’ ಕುರಿತು ಸಂವಾದ ವತಿಯಿಂದ ಶುಕ್ರವಾರ ನಡೆದ ಆನ್ಲೈನ್ ಸಂವಾದದಲ್ಲಿ ಮಾತನಾಡಿದರು.
‘ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಆರು ಸಾವಿರಕ್ಕೂ ಹೆಚ್ಚಿನ ಹಿಂಸಾಚಾರ ಘಟನೆಗಳು ನಡೆದಿದ್ದು, 40 ಪ್ರಕರಣಗಳಲ್ಲಿ ಮಾತ್ರ ಎಫ್ಐಆರ್ ದಾಖಲಾಗಿದ್ದು, ಅಲ್ಲಿನ ಪೊಲೀಸ್ ವ್ಯವಸ್ಥೆ ರಾಜಕೀಯಕರಣಗೊಂಡಿದೆ.ಆಡಳಿತದ ರಾಜಕೀಯಕರಣ ಹಾಗೂ ರಾಜಕೀಯದ ಅಪರಾಧೀಕರಣವನ್ನು ಆ ರಾಜ್ಯದಲ್ಲಿ ಕಾಣಬಹುದು’ ಎಂದರು.
‘ಅಲ್ಲಿನ ಆಡಳಿತ ಹಾಗೂ ರಾಜಕೀಯಕ್ಕೆ ಭ್ರಷ್ಟಾಚಾರ ನೆಲೆ ನೀಡಿದೆ. ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ನೀಡಿದ ಪಡಿತರ ಹಾಗೂಕೊರೊನಾ ಸಂದರ್ಭದಲ್ಲಿ ವಿತರಿಸಿರುವ ಪಡಿತರ, ಪರಿಹಾರವನ್ನುಪಶ್ಚಿಮ ಬಂಗಾಳದ ಆಡಳಿತ ವ್ಯವಸ್ಥೆ ತಿಂದು ತೇಗಿದೆ. ಪಡಿತರ ಅಂಗಡಿಗಳ ಮಾಲೀಕರು ಹಾಗೂ ಪರಿಹಾರದ ಹಣ ನೀಡುವವರು ಟಿಎಂಸಿ ಪಕ್ಷದವರೇ ಆಗಿರುತ್ತಾರೆ’ ಎಂದು ಟೀಕಿಸಿದರು.
‘ಬಂಗಾಳದಲ್ಲಿ ಸ್ಥಳೀಯ ಮಟ್ಟದಲ್ಲಿರುವ ಅನೇಕ ಟಿಎಂಸಿ ನಾಯಕರು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರು. ಚುನಾವಣೆ ನಂತರದ ಹಿಂಸಾಚಾರದ ಹಿಂದೆ ಇದ್ದವರು ಮುಸ್ಲಿಂ ವಲಸಿಗರು’ ಎಂದು ಅವರು ಹೇಳಿದರು.