ದುಬೈನಲ್ಲಿ ವಾಸವಿದ್ದ ಹೆಣ್ಣು ಮಗು ‘ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ’ ಎಂಬ ರಕ್ತ ಸಂಬಂಧಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಳು. ಈ ಕ್ಯಾನ್ಸರ್ನಿಂದ ಮಗು ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿತ್ತು. ಮಗುವನ್ನು ತಪಾಸಣೆ ಮಾಡಿದ ಡಾ. ನೀಮಾ ಭಟ್ ಮತ್ತು ಡಾ.ಮಂಗೇಶ್ ಪಿ. ಕಾಮತ್ ನೇತೃತ್ವದ ವೈದ್ಯರ ತಂಡ, ಮಗುವಿನ ಸಹೋದರಿಯ ಅಸ್ಥಿಮಜ್ಜೆ ಪಡೆದು, ಕಸಿ ಮಾಡಿದ್ದಾರೆ. ರಕ್ತ ಕ್ಯಾನ್ಸರ್ಗೆ ನೀಡಲಾಗಿರುವ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.