<p><strong>ಬೆಂಗಳೂರು:</strong>ಥಲಸ್ಸೇಮಿಯಾದಿಂದ ನರಳಿದ್ದ ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಬಾಲಕಿ ತನಗೆ ರಕ್ತದ ಆಕರಕೋಶವನ್ನು ದಾನ ಮಾಡಿದ್ದ ನಗರದ ಟೆಕಿಯನ್ನು ಎರಡು ವರ್ಷಗಳ ಬಳಿಕ ಭೇಟಿ ಮಾಡಿ, ಧನ್ಯವಾದ ತಿಳಿಸಿದಳು.</p>.<p>ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಜಾಗತಿಕ ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್ಟಿ ಫೌಂಡೇ ಷನ್’ ಮಂಗಳವಾರ ಆಯೋಜಿಸಿದ್ದ ಕಾರ್ಯ ಕ್ರಮ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು.</p>.<p>ಬಾಲಕಿ ಶಿಯಾ, ದಾನಿ 26 ವರ್ಷದದೆಬೋಜ್ಯೋತಿ ಅವರಿಗೆ ಕೃತಜ್ಞತೆ ಸಲ್ಲಿಸಿದಳು.</p>.<p>‘2016ರಲ್ಲಿ ಸ್ವ ಇಚ್ಛೆಯಿಂದ ರಕ್ತದ ಆಕರಕೋಶ ದಾನ ಮಾಡಲು ಹೆಸರು ನೋಂದಾಯಿಸಿದೆ. ನನ್ನ ರಕ್ತದ ಆಕರಕೋಶವನ್ನು ಯಾರಿಗೆ ನೀಡಲಾಗಿದೆ ಎಂಬುದು ತಿಳಿದಿರಲಿಲ್ಲ. ನನ್ನಿಂದ ಪುಟ್ಟ ಬಾಲಕಿಯ ಕಾಯಿಲೆ ಶಮನವಾಗಿರುವುದು ಅತೀವ ಸಂತೋಷವನ್ನುಂಟು ಮಾಡಿದೆ’ ಎಂದುದೆಬೋಜ್ಯೋತಿ ತಿಳಿಸಿದರು.</p>.<p>ಶಿಯಾಳ ತಂದೆ ಸೈಫುಲ್ಲ ಮಾತನಾಡಿ, ‘ರಕ್ತದ ಆಕರ ಕೋಶದ ಕಸಿಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದ ಪರಿಣಾಮ ನಿರಾಸೆಗೆ ಒಳಗಾಗಿದ್ದೆವು. ರಕ್ತದ ಆಕರಕೋಶ ಕಸಿಯಿಂದಥಲಸ್ಸೇಮಿಯಾ ಕಾಯಿಲೆಯನ್ನು ಗುಣಪಡಿಸಬಹುದು ಎಂಬುದು ತಿಳಿಯಿತು. ಒಂದು ವರ್ಷದಲ್ಲಿಯೇ ಹೊಂದಾಣಿಕೆಯಾಗುವ ರಕ್ತದ ಆಕರಕೋಶ ದೊರೆಯಿತು’ ಎಂದರು.</p>.<p>ಡಿಕೆಎಂಎಸ್– ಬಿಎಂಎಸ್ಟಿ ಫೌಂಡೇಷನ್ ನಿರ್ದೇಶಕಿಡಾ.ಲತಾ ಜಗನ್ನಾಥನ್, ‘ಕ್ಯಾನ್ಸರ್ಗೆ ರಕ್ತದ ಆಕರಕೋಶ ಕಸಿ ಪರಿಹಾರವಾಗಿದೆ. ನಮ್ಮಲ್ಲಿ 40 ಸಾವಿರ ದಾನಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಜನತೆಯಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕು‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಥಲಸ್ಸೇಮಿಯಾದಿಂದ ನರಳಿದ್ದ ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಬಾಲಕಿ ತನಗೆ ರಕ್ತದ ಆಕರಕೋಶವನ್ನು ದಾನ ಮಾಡಿದ್ದ ನಗರದ ಟೆಕಿಯನ್ನು ಎರಡು ವರ್ಷಗಳ ಬಳಿಕ ಭೇಟಿ ಮಾಡಿ, ಧನ್ಯವಾದ ತಿಳಿಸಿದಳು.</p>.<p>ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಜಾಗತಿಕ ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್ಟಿ ಫೌಂಡೇ ಷನ್’ ಮಂಗಳವಾರ ಆಯೋಜಿಸಿದ್ದ ಕಾರ್ಯ ಕ್ರಮ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು.</p>.<p>ಬಾಲಕಿ ಶಿಯಾ, ದಾನಿ 26 ವರ್ಷದದೆಬೋಜ್ಯೋತಿ ಅವರಿಗೆ ಕೃತಜ್ಞತೆ ಸಲ್ಲಿಸಿದಳು.</p>.<p>‘2016ರಲ್ಲಿ ಸ್ವ ಇಚ್ಛೆಯಿಂದ ರಕ್ತದ ಆಕರಕೋಶ ದಾನ ಮಾಡಲು ಹೆಸರು ನೋಂದಾಯಿಸಿದೆ. ನನ್ನ ರಕ್ತದ ಆಕರಕೋಶವನ್ನು ಯಾರಿಗೆ ನೀಡಲಾಗಿದೆ ಎಂಬುದು ತಿಳಿದಿರಲಿಲ್ಲ. ನನ್ನಿಂದ ಪುಟ್ಟ ಬಾಲಕಿಯ ಕಾಯಿಲೆ ಶಮನವಾಗಿರುವುದು ಅತೀವ ಸಂತೋಷವನ್ನುಂಟು ಮಾಡಿದೆ’ ಎಂದುದೆಬೋಜ್ಯೋತಿ ತಿಳಿಸಿದರು.</p>.<p>ಶಿಯಾಳ ತಂದೆ ಸೈಫುಲ್ಲ ಮಾತನಾಡಿ, ‘ರಕ್ತದ ಆಕರ ಕೋಶದ ಕಸಿಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದ ಪರಿಣಾಮ ನಿರಾಸೆಗೆ ಒಳಗಾಗಿದ್ದೆವು. ರಕ್ತದ ಆಕರಕೋಶ ಕಸಿಯಿಂದಥಲಸ್ಸೇಮಿಯಾ ಕಾಯಿಲೆಯನ್ನು ಗುಣಪಡಿಸಬಹುದು ಎಂಬುದು ತಿಳಿಯಿತು. ಒಂದು ವರ್ಷದಲ್ಲಿಯೇ ಹೊಂದಾಣಿಕೆಯಾಗುವ ರಕ್ತದ ಆಕರಕೋಶ ದೊರೆಯಿತು’ ಎಂದರು.</p>.<p>ಡಿಕೆಎಂಎಸ್– ಬಿಎಂಎಸ್ಟಿ ಫೌಂಡೇಷನ್ ನಿರ್ದೇಶಕಿಡಾ.ಲತಾ ಜಗನ್ನಾಥನ್, ‘ಕ್ಯಾನ್ಸರ್ಗೆ ರಕ್ತದ ಆಕರಕೋಶ ಕಸಿ ಪರಿಹಾರವಾಗಿದೆ. ನಮ್ಮಲ್ಲಿ 40 ಸಾವಿರ ದಾನಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಜನತೆಯಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕು‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>