ಇದಕ್ಕೆ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ವೇದಿಕೆ ಕಲ್ಪಿಸಿತ್ತು. ನಗರದಲ್ಲಿ ಪ್ರತಿಷ್ಠಾನ ಮಂಗಳವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅಗಲಿದ ಗಣ್ಯರಿಗೆ ಒಡನಾಡಿಗಳು ಹಾಗೂ ಆಪ್ತರು ನುಡಿನಮನ ಸಲ್ಲಿಸಿದರು. ಎಲ್. ಹನುಮಂತಯ್ಯ, ಪಿ.ವಿ. ನಾರಾಯಣ, ವಿಜಯಾ ಸುಬ್ಬರಾಜ್, ನಳಿನಿ ವೆಂಕಟೇಶ್, ಪದ್ಮಿನಿ ನಾಗರಾಜು, ಎಚ್.ಎಸ್.ಎಂ. ಪ್ರಕಾಶ್, ಬೈರಮಂಗಲ ರಾಮೇಗೌಡ, ಪ್ರೊ. ಶಾಂತರಾಜು, ಬಿ.ಆರ್. ರವೀಂದ್ರನಾಥ್ ನೆನಪಿನ ಪುಟಗಳನ್ನು ತಿರುವಿ ಹಾಕಿದರು.