<p><strong>ಬೆಂಗಳೂರು:</strong> ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ಪ್ಲ್ಯಾಟ್ಫಾರಂ ಸ್ಕ್ರೀನ್ಡೋರ್ (ಪಿಎಸ್ಡಿ) ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಮುಂದಾಗಿದೆ. ಈ ವ್ಯವಸ್ಥೆ ಪ್ಲ್ಯಾಟ್ಫಾರಂಗಳ ಸುರಕ್ಷತೆಯನ್ನು ಹೆಚ್ಚಿಸುವುದೂ ಅಲ್ಲದೇ, ಪ್ರಯಾಣಿಕರು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವುದನ್ನು ತಪ್ಪಿಸಲಿದೆ.</p>.<p>ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಇದೇ 11ರಂದು ಯುವಕನೊಬ್ಬ ಮೆಟ್ರೊ ರೈಲು ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಹಳಿಗಳ ನಡುವೆ ಬಿದ್ದಿದ್ದರಿಂದ ಆತ ಬದುಕುಳಿದಿದ್ದ. ಈ ಘಟನೆ ಬಳಿಕ ಪಿಎಸ್ಡಿ ಅಳವಡಿಕೆ ಬಗ್ಗೆ ನಿಗಮವು ಗಂಭೀರ ಚಿಂತನೆ<br />ನಡೆಸಿದೆ.</p>.<p>‘ಎರಡನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗೆ ನಿರ್ಮಾಣವಾಗುವ ಸುರಂಗ ಮಾರ್ಗದ 12 ನಿಲ್ದಾಣಗಳಲ್ಲಿ ಪಿಎಸ್ಡಿ ವ್ಯವಸ್ಥೆ ಅಳವಡಿಸಲಿದ್ದೇವೆ. ಈ ವ್ಯವಸ್ಥೆ ಅಳವಡಿಸಿದರೆ ಪ್ರಯಾಣಿಕರು ಹಳಿಗೆ ಬೀಳುವುದಕ್ಕೆ ಅವಕಾಶವೇ ಇರುವುದಿಲ್ಲ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇದು ಹೊಸ ವ್ಯವಸ್ಥೆ ಏನಲ್ಲ. ಈಗಾಗಲೇ ಅನೇಕ ದೇಶಗಳಲ್ಲಿ ಇದು ಬಳಕೆಯಲ್ಲಿದೆ. ಸುರಂಗ ಮಾರ್ಗದ ನಿಲ್ದಾಣದಲ್ಲಿ ಪಿಎಸ್ಡಿ ಅಳವಡಿಸುವುದಕ್ಕೆ ಹೆಚ್ಚು ವೆಚ್ಚವಾಗುವುದೇನೋ ನಿಜ. ಆದರೆ, ಈ ವ್ಯವಸ್ಥೆ ಅಳವಡಿಕೆಯಿಂದ ಈ ನಿಲ್ದಾಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಗೆ ಬಳಕೆಯಾಗುವ ವಿದ್ಯುತ್ ಉಳಿತಾಯವೂ ಆಗುತ್ತದೆ. ಜತೆಗೆ ಸುರಕ್ಷತೆಯೂ ಹೆಚ್ಚುತ್ತದೆ. ಹಾಗಾಗಿ ಇದರಿಂದ ದೂರಗಾಮಿ ಪ್ರಯೋಜನವಿದೆ’ ಎಂದು ಅವರು ವಿವರಿಸಿದರು.</p>.<p>ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ನಡೆದ ಘಟನೆ ನಡೆದ ಬಳಿಕ ಎಲ್ಲ ಮೆಟ್ರೊ ನಿಲ್ದಾಣಗಳಲ್ಲೂ ಪಿಎಸ್ಡಿ ವ್ಯವಸ್ಥೆ ಒದಗಿಸಬೇಕು ಎಂಬ ಬೇಡಿಕೆ ಹೆಚ್ಚಿದೆ.</p>.<p>‘ನವದೆಹಲಿ ಹಾಗೂ ಚೆನ್ನೈ ಮೆಟ್ರೊಗಳಲ್ಲಿ ಪಿಎಸ್ಡಿ ವ್ಯವಸ್ಥೆ ಈಗಾಗಲೇ ಇದೆ. ಮೆಟ್ರೊ ಯೋಜನೆ ರೂಪಿಸುವಾಗಲೇ ಈ ಬಗ್ಗೆ ಮುಂದಾಲೋಚನೆಮಾಡುತ್ತಿದ್ದರೆ ಇಂತಹಘಟನೆಗಳನ್ನುತಡೆಯಲುಸಾಧ್ಯವಿತ್ತು. ಇನ್ನುಕೂಡಾ ಕಾಲ ಮಿಂಚಿಲ್ಲ. ಎಲ್ಲ ಪ್ಲ್ಯಾಟ್ಫಾರಂಗಳಲ್ಲೂ ಪಿಎಸ್ಡಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕರ್ನಾಟಕ ರೈಲ್ವೆ ವೇದಿಕೆ ಕೆ.ಎನ್.ಕೃಷ್ಣಪ್ರಸಾದ್ ಒತ್ತಾಯಿಸಿದರು.</p>.<p>‘ಎಲ್ಲ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಪರಿವರ್ತಿಸಿದ ಬಳಿಕ ಹಾಗೂ ಎರಡನೇ ಹಂತದ ವಿಸ್ತರಣಾ ಕಾಮಗಾರಿ </p>.<p>ಪೂರ್ಣಗೊಂಡು ವೈಟ್ಫೀಲ್ಡ್ನಿಂದ ಕೆಂಗೇರಿವರೆಗೆ ಮೆಟ್ರೊ ಸಂಪರ್ಕ ಸಾಧ್ಯವಾದ ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಆಗ ಸುರಕ್ಷತಾ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ. ಹಾಗಾಗಿ ನಿಗಮದವರು ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ಎಲ್ಲ ನಿಲ್ದಾಣಗಳಗಳಲ್ಲೂ ಈ ವ್ಯವಸ್ಥೆ ಅಳವಡಿಸಬಹುದು. ಆದರೆ, ಪ್ಲ್ಯಾಟ್ಫಾರಂಗಳಲ್ಲಿ ಸದ್ಯ ಅಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರ ದಟ್ಟಣೆ ಇಲ್ಲ. ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಎಲ್ಲಾ ನಿಲ್ದಾಣಗಳಲ್ಲೂ ಪಿಎಸ್ಡಿ ವ್ಯವಸ್ಥೆ ಅಳವಡಿಸುತ್ತೇವೆ’ ಎಂದು ಚೌಹಾಣ್ ತಿಳಿಸಿದರು.</p>.<p>ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ನಡೆದ ಘಟನೆ ಮರುಕಳಿಸದಂತೆ ತಡೆಯುವುದು ಬಿಎಂಆರ್ಸಿಎಲ್ ಪಾಲಿಗೂ ಸವಾಲಿನ ವಿಷಯವಾಗಿದೆ.</p>.<p>‘ನಿಲ್ದಾಣಗಳಲ್ಲಿ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇವೆ. ಶೀಘ್ರವೇ ಈ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ’ ಎಂದು ಚೌಹಾಣ್ ತಿಳಿಸಿದರು.</p>.<p><strong>ಏನಿದು ಪ್ಲ್ಯಾಟ್ಫಾರಂ ಸ್ಕ್ರೀನ್ಡೋರ್</strong></p>.<p>ಪ್ಲ್ಯಾಟ್ಫಾರಂ ನೆಲದಿಂದ ಚಾವಣಿವರೆಗೆ ಸಂಪೂರ್ಣ ಅಡ್ಡಗೋಡೆ ನಿರ್ಮಿಸಿ ರೈಲು ಬಂದು ನಿಂತಾಗ ಮಾತ್ರ ಬಾಗಿಲು ತೆರೆಯುವಂತಹ ವ್ಯವಸ್ಥೆಯೇ ಪಿಎಸ್ಡಿ. ಫ್ಲ್ಯಾಟ್ಫಾರಂನ ಬಾಗಿಲು ಮುಚ್ಚದ ಹೊರತು ರೈಲು ಮುಂದಕ್ಕೆ ಚಲಿಸುವುದಿಲ್ಲ. ಹಾಗಾಗಿ ಯಾವುದೇ ವ್ಯಕ್ತಿ ಹಳಿಗೆ ಬೀಳುವ ಸಾಧ್ಯತೆ ಇರುವುದಿಲ್ಲ.</p>.<p>ಪ್ರಯಾಣಿಕರು ಹಳಿಯ ಮೇಳೆ ಬೀಳುವುದನ್ನು ತಡೆಯಲು ಪ್ಲ್ಯಾಟ್ಫಾರಂ ಎಡ್ಜ್ ಡೋರ್ (ಪಿಇಡಿ) ವ್ಯವಸ್ಥೆಯನ್ನೂ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಬಳಸಲಾಗುತ್ತದೆ. ಪಿಇಡಿ ವ್ಯವಸ್ಥೆಯಲ್ಲಿ ನೆಲದಿಂದ ಚಾವಣಿವರೆಗೆ ಅಡ್ಡಗೋಡೆ ನಿರ್ಮಿಸುವ ಬದಲು ಅರ್ಧದವರೆಗೆ ಮಾತ್ರ ತಡೆಗೋಡೆ ನಿರ್ಮಿಸಲಾಗುತ್ತದೆ. ಪಿಎಸ್ಡಿಗೆ<br />ಹೋಲಿಸಿದರೆ ಇವುಗಳ ಅಳವಡಿಕೆಗೆ ಕಡಿಮೆ<br />ವೆಚ್ಚ ಸಾಕು.</p>.<p><strong>ಅನುಕೂಲಗಳೇನು?</strong></p>.<p>* ಹೆಚ್ಚು ಸುರಕ್ಷಿತ</p>.<p>* ಪ್ರಯಾಣಿಕರು ಹಳಿಗೆ ಬಿದ್ದು ಅಪಘಾತ ಉಂಟಾಗುವುದನ್ನು ತಡೆಯಲು ಸಹಕಾರಿ</p>.<p>* ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯುತ್ತವೆ</p>.<p>* ನಿಲ್ದಾಣದ ಒಳಗೆ ಹವಾನಿಯಂತ್ರಣ ವ್ಯವಸ್ಥೆ ನಿರ್ವಹಣೆಗೂ (ವಿಶೇಷವಾಗಿ ಸುರಂಗ ಮಾರ್ಗಗಳಲ್ಲಿ) ಪ್ರಯೋಜನಕಾರಿ</p>.<p>* ಪ್ಲ್ಯಾಟ್ಫಾರಂ ನಿರ್ವಹಣೆಗೆ ಕಡಿಮೆ ಮಾನವ ಸಂಪನ್ಮೂಲ (ಭದ್ರತಾ ಸಿಬ್ಬಂದಿ) ಸಾಕಾಗುತ್ತದೆ</p>.<p>* ಹಳಿ ಮೇಲೆ ಕಸ ಬೀಳುವುದನ್ನು ತಡೆಯುತ್ತದೆ. (ಹೈವೋಲ್ಟೇಜ್ನ ವಿದ್ಯುತ್ ಮಾರ್ಗವೂ ಹಳಿಯ<br />ಪಕ್ಕ ಇರುವುದರಿಂದ ಕೆಲವೊಮ್ಮೆ ಅದರ ಮೇಲೆ ಕಸ ಬಿದ್ದು ಬೆಂಕಿ ಉಂಟಾಗುವ ಅಪಾಯವೂ<br />ಇರುತ್ತದೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ಪ್ಲ್ಯಾಟ್ಫಾರಂ ಸ್ಕ್ರೀನ್ಡೋರ್ (ಪಿಎಸ್ಡಿ) ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಮುಂದಾಗಿದೆ. ಈ ವ್ಯವಸ್ಥೆ ಪ್ಲ್ಯಾಟ್ಫಾರಂಗಳ ಸುರಕ್ಷತೆಯನ್ನು ಹೆಚ್ಚಿಸುವುದೂ ಅಲ್ಲದೇ, ಪ್ರಯಾಣಿಕರು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವುದನ್ನು ತಪ್ಪಿಸಲಿದೆ.</p>.<p>ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಇದೇ 11ರಂದು ಯುವಕನೊಬ್ಬ ಮೆಟ್ರೊ ರೈಲು ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಹಳಿಗಳ ನಡುವೆ ಬಿದ್ದಿದ್ದರಿಂದ ಆತ ಬದುಕುಳಿದಿದ್ದ. ಈ ಘಟನೆ ಬಳಿಕ ಪಿಎಸ್ಡಿ ಅಳವಡಿಕೆ ಬಗ್ಗೆ ನಿಗಮವು ಗಂಭೀರ ಚಿಂತನೆ<br />ನಡೆಸಿದೆ.</p>.<p>‘ಎರಡನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗೆ ನಿರ್ಮಾಣವಾಗುವ ಸುರಂಗ ಮಾರ್ಗದ 12 ನಿಲ್ದಾಣಗಳಲ್ಲಿ ಪಿಎಸ್ಡಿ ವ್ಯವಸ್ಥೆ ಅಳವಡಿಸಲಿದ್ದೇವೆ. ಈ ವ್ಯವಸ್ಥೆ ಅಳವಡಿಸಿದರೆ ಪ್ರಯಾಣಿಕರು ಹಳಿಗೆ ಬೀಳುವುದಕ್ಕೆ ಅವಕಾಶವೇ ಇರುವುದಿಲ್ಲ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇದು ಹೊಸ ವ್ಯವಸ್ಥೆ ಏನಲ್ಲ. ಈಗಾಗಲೇ ಅನೇಕ ದೇಶಗಳಲ್ಲಿ ಇದು ಬಳಕೆಯಲ್ಲಿದೆ. ಸುರಂಗ ಮಾರ್ಗದ ನಿಲ್ದಾಣದಲ್ಲಿ ಪಿಎಸ್ಡಿ ಅಳವಡಿಸುವುದಕ್ಕೆ ಹೆಚ್ಚು ವೆಚ್ಚವಾಗುವುದೇನೋ ನಿಜ. ಆದರೆ, ಈ ವ್ಯವಸ್ಥೆ ಅಳವಡಿಕೆಯಿಂದ ಈ ನಿಲ್ದಾಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಗೆ ಬಳಕೆಯಾಗುವ ವಿದ್ಯುತ್ ಉಳಿತಾಯವೂ ಆಗುತ್ತದೆ. ಜತೆಗೆ ಸುರಕ್ಷತೆಯೂ ಹೆಚ್ಚುತ್ತದೆ. ಹಾಗಾಗಿ ಇದರಿಂದ ದೂರಗಾಮಿ ಪ್ರಯೋಜನವಿದೆ’ ಎಂದು ಅವರು ವಿವರಿಸಿದರು.</p>.<p>ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ನಡೆದ ಘಟನೆ ನಡೆದ ಬಳಿಕ ಎಲ್ಲ ಮೆಟ್ರೊ ನಿಲ್ದಾಣಗಳಲ್ಲೂ ಪಿಎಸ್ಡಿ ವ್ಯವಸ್ಥೆ ಒದಗಿಸಬೇಕು ಎಂಬ ಬೇಡಿಕೆ ಹೆಚ್ಚಿದೆ.</p>.<p>‘ನವದೆಹಲಿ ಹಾಗೂ ಚೆನ್ನೈ ಮೆಟ್ರೊಗಳಲ್ಲಿ ಪಿಎಸ್ಡಿ ವ್ಯವಸ್ಥೆ ಈಗಾಗಲೇ ಇದೆ. ಮೆಟ್ರೊ ಯೋಜನೆ ರೂಪಿಸುವಾಗಲೇ ಈ ಬಗ್ಗೆ ಮುಂದಾಲೋಚನೆಮಾಡುತ್ತಿದ್ದರೆ ಇಂತಹಘಟನೆಗಳನ್ನುತಡೆಯಲುಸಾಧ್ಯವಿತ್ತು. ಇನ್ನುಕೂಡಾ ಕಾಲ ಮಿಂಚಿಲ್ಲ. ಎಲ್ಲ ಪ್ಲ್ಯಾಟ್ಫಾರಂಗಳಲ್ಲೂ ಪಿಎಸ್ಡಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕರ್ನಾಟಕ ರೈಲ್ವೆ ವೇದಿಕೆ ಕೆ.ಎನ್.ಕೃಷ್ಣಪ್ರಸಾದ್ ಒತ್ತಾಯಿಸಿದರು.</p>.<p>‘ಎಲ್ಲ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಪರಿವರ್ತಿಸಿದ ಬಳಿಕ ಹಾಗೂ ಎರಡನೇ ಹಂತದ ವಿಸ್ತರಣಾ ಕಾಮಗಾರಿ </p>.<p>ಪೂರ್ಣಗೊಂಡು ವೈಟ್ಫೀಲ್ಡ್ನಿಂದ ಕೆಂಗೇರಿವರೆಗೆ ಮೆಟ್ರೊ ಸಂಪರ್ಕ ಸಾಧ್ಯವಾದ ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಆಗ ಸುರಕ್ಷತಾ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ. ಹಾಗಾಗಿ ನಿಗಮದವರು ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ಎಲ್ಲ ನಿಲ್ದಾಣಗಳಗಳಲ್ಲೂ ಈ ವ್ಯವಸ್ಥೆ ಅಳವಡಿಸಬಹುದು. ಆದರೆ, ಪ್ಲ್ಯಾಟ್ಫಾರಂಗಳಲ್ಲಿ ಸದ್ಯ ಅಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರ ದಟ್ಟಣೆ ಇಲ್ಲ. ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಎಲ್ಲಾ ನಿಲ್ದಾಣಗಳಲ್ಲೂ ಪಿಎಸ್ಡಿ ವ್ಯವಸ್ಥೆ ಅಳವಡಿಸುತ್ತೇವೆ’ ಎಂದು ಚೌಹಾಣ್ ತಿಳಿಸಿದರು.</p>.<p>ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ನಡೆದ ಘಟನೆ ಮರುಕಳಿಸದಂತೆ ತಡೆಯುವುದು ಬಿಎಂಆರ್ಸಿಎಲ್ ಪಾಲಿಗೂ ಸವಾಲಿನ ವಿಷಯವಾಗಿದೆ.</p>.<p>‘ನಿಲ್ದಾಣಗಳಲ್ಲಿ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇವೆ. ಶೀಘ್ರವೇ ಈ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ’ ಎಂದು ಚೌಹಾಣ್ ತಿಳಿಸಿದರು.</p>.<p><strong>ಏನಿದು ಪ್ಲ್ಯಾಟ್ಫಾರಂ ಸ್ಕ್ರೀನ್ಡೋರ್</strong></p>.<p>ಪ್ಲ್ಯಾಟ್ಫಾರಂ ನೆಲದಿಂದ ಚಾವಣಿವರೆಗೆ ಸಂಪೂರ್ಣ ಅಡ್ಡಗೋಡೆ ನಿರ್ಮಿಸಿ ರೈಲು ಬಂದು ನಿಂತಾಗ ಮಾತ್ರ ಬಾಗಿಲು ತೆರೆಯುವಂತಹ ವ್ಯವಸ್ಥೆಯೇ ಪಿಎಸ್ಡಿ. ಫ್ಲ್ಯಾಟ್ಫಾರಂನ ಬಾಗಿಲು ಮುಚ್ಚದ ಹೊರತು ರೈಲು ಮುಂದಕ್ಕೆ ಚಲಿಸುವುದಿಲ್ಲ. ಹಾಗಾಗಿ ಯಾವುದೇ ವ್ಯಕ್ತಿ ಹಳಿಗೆ ಬೀಳುವ ಸಾಧ್ಯತೆ ಇರುವುದಿಲ್ಲ.</p>.<p>ಪ್ರಯಾಣಿಕರು ಹಳಿಯ ಮೇಳೆ ಬೀಳುವುದನ್ನು ತಡೆಯಲು ಪ್ಲ್ಯಾಟ್ಫಾರಂ ಎಡ್ಜ್ ಡೋರ್ (ಪಿಇಡಿ) ವ್ಯವಸ್ಥೆಯನ್ನೂ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಬಳಸಲಾಗುತ್ತದೆ. ಪಿಇಡಿ ವ್ಯವಸ್ಥೆಯಲ್ಲಿ ನೆಲದಿಂದ ಚಾವಣಿವರೆಗೆ ಅಡ್ಡಗೋಡೆ ನಿರ್ಮಿಸುವ ಬದಲು ಅರ್ಧದವರೆಗೆ ಮಾತ್ರ ತಡೆಗೋಡೆ ನಿರ್ಮಿಸಲಾಗುತ್ತದೆ. ಪಿಎಸ್ಡಿಗೆ<br />ಹೋಲಿಸಿದರೆ ಇವುಗಳ ಅಳವಡಿಕೆಗೆ ಕಡಿಮೆ<br />ವೆಚ್ಚ ಸಾಕು.</p>.<p><strong>ಅನುಕೂಲಗಳೇನು?</strong></p>.<p>* ಹೆಚ್ಚು ಸುರಕ್ಷಿತ</p>.<p>* ಪ್ರಯಾಣಿಕರು ಹಳಿಗೆ ಬಿದ್ದು ಅಪಘಾತ ಉಂಟಾಗುವುದನ್ನು ತಡೆಯಲು ಸಹಕಾರಿ</p>.<p>* ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯುತ್ತವೆ</p>.<p>* ನಿಲ್ದಾಣದ ಒಳಗೆ ಹವಾನಿಯಂತ್ರಣ ವ್ಯವಸ್ಥೆ ನಿರ್ವಹಣೆಗೂ (ವಿಶೇಷವಾಗಿ ಸುರಂಗ ಮಾರ್ಗಗಳಲ್ಲಿ) ಪ್ರಯೋಜನಕಾರಿ</p>.<p>* ಪ್ಲ್ಯಾಟ್ಫಾರಂ ನಿರ್ವಹಣೆಗೆ ಕಡಿಮೆ ಮಾನವ ಸಂಪನ್ಮೂಲ (ಭದ್ರತಾ ಸಿಬ್ಬಂದಿ) ಸಾಕಾಗುತ್ತದೆ</p>.<p>* ಹಳಿ ಮೇಲೆ ಕಸ ಬೀಳುವುದನ್ನು ತಡೆಯುತ್ತದೆ. (ಹೈವೋಲ್ಟೇಜ್ನ ವಿದ್ಯುತ್ ಮಾರ್ಗವೂ ಹಳಿಯ<br />ಪಕ್ಕ ಇರುವುದರಿಂದ ಕೆಲವೊಮ್ಮೆ ಅದರ ಮೇಲೆ ಕಸ ಬಿದ್ದು ಬೆಂಕಿ ಉಂಟಾಗುವ ಅಪಾಯವೂ<br />ಇರುತ್ತದೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>