ಬೆಂಗಳೂರು: ಉತ್ತಮ ಆರೋಗ್ಯ ಸೇವೆ ಮತ್ತು ಗುಣಮಟ್ಟದ ಚಿಕಿತ್ಸೆಯು ಜನರ ಮಾನಸಿಕ ಚೈತನ್ಯ ಹೆಚ್ಚಿಸುತ್ತದೆ ಎಂದು ಬಿಎಂಎಸ್ ಆಸ್ಪತ್ರೆಯ ಟ್ರಸ್ಟಿ ಡಾ.ರಾಗಿಣಿ ನಾರಾಯಣ್ ತಿಳಿಸಿದರು.
ಬಿಎಂಎಸ್ ಆಸ್ಪತ್ರೆ ಸಂಸ್ಥಾಪನಾ ದಿನಾಚರಣೆ ಹಾಗೂ ಹೊಸ ಬ್ಲಾಕ್ ಉದ್ಘಾಟಿಸಿ ಅವರು ಮಾತನಾಡಿದರು. ‘ನಾವು ಮಾಡುವ ಕಾರ್ಯಗಳಲ್ಲಿ ಪ್ರಾಮಾಣಿಕತೆ ಮತ್ತು ಸಂತೃಪ್ತಿ ಇಟ್ಟುಕೊಂಡಾಗ ಆ ಸೇವೆಯ ಮೌಲ್ಯವರ್ದನೆ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.
ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಬಿಎಂಎಸ್ ಆಸ್ಪತ್ರೆಯು ಸುತ್ತ ಮುತ್ತಲಿನ ಬಡವರಿಗೆ ರಿಯಾಯಿತಿ ನೀಡಿ ಸ್ಪಂದಿಸುತ್ತಿದೆ’ ಎಂದು ಹೇಳಿದರು.