‘ಮಹಿಳಾ ಪ್ರಯಾಣಿಕರು ಘಟನೆ ಬಗ್ಗೆ ವಿವರಿಸಿ, ಬ್ಯಾಗ್ನಲ್ಲಿರುವ ವಸ್ತುಗಳ ಗುರುತು ಹೇಳಿದ್ದರು. ಆರೋಪಿ ಯಾವುದೇ ಗುರುತು ಹೇಳಿರಲಿಲ್ಲ. ಚಾಲಕ ಹಾಗೂ ಸ್ಥಳೀಯರು, ಕವಿತಾ ಅವರನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸುಪರ್ದಿಗೆ ಒಪ್ಪಿಸಿದ್ದರು. ಇದೇ ಮೊದಲ ಬಾರಿಗೆ ಆರೋಪಿ ಕೃತ್ಯ ಎಸಗಲು ಯತ್ನಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.