<p>ಬೆಂಗಳೂರು: ಯುವ ಜನರ ಸಬಲೀಕರಣಕ್ಕಾಗಿ ಕೇಂದ್ರ ಯುವ ನೀತಿಯ ಮಾದರಿಯಲ್ಲೇ ಕರ್ನಾಟಕ ಸರ್ಕಾರ ಯುವಜನ ಕೇಂದ್ರಿತ ಹೊಸ ನೀತಿಯೊಂದನ್ನು ರೂಪಿಸಲು ಚಾಲನೆ ನೀಡಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.</p>.<p>ಗುವಾಹಟಿಯಲ್ಲಿ 8ನೇ ಕಾಮನ್ವೆಲ್ತ್ ಸಂಸದೀಯ ಸಂಘ ಏರ್ಪಡಿಸಿರುವ ‘ಮುಖ್ಯವಾಹಿನಿಯ ಯುವ ಕೇಂದ್ರಿತ ನೀತಿಗಳು’ ವಿಷಯ ಕುರಿತ ಸಮ್ಮೇಳನದಲ್ಲಿ ಸೋಮವಾರ ಮಾತನಾ<br />ಡಿದ ಅವರು, ಕರ್ನಾಟಕದಲ್ಲಿ15 ರಿಂದ 29 ವರ್ಷದೊಳಗಿನ ವಯಸ್ಸಿನವರು ಶೇ 30ರಿಂದ 40ರಷ್ಟು ಇದ್ದಾರೆ ಎಂದರು.</p>.<p>ಯುವ ಜನರು ಎದುರಿಸುತ್ತಿರುವ ಅಡ್ಡಿ– ಆತಂಕಗಳು ಮತ್ತು ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ಅವರಿಗೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ನೆರವು ನೀಡಬೇಕು ಹಾಗೂ ಅವರ ನೈಜ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲು ಅವಕಾಶ ನೀಡಬೇಕು. ಈ ಉದ್ದೇಶದಿಂದ ‘ಕರ್ನಾಟಕ ಯುವ ನೀತಿ 2022’ ಅನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದು ಕಾಗೇರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಯುವ ಜನರ ಸಬಲೀಕರಣಕ್ಕಾಗಿ ಕೇಂದ್ರ ಯುವ ನೀತಿಯ ಮಾದರಿಯಲ್ಲೇ ಕರ್ನಾಟಕ ಸರ್ಕಾರ ಯುವಜನ ಕೇಂದ್ರಿತ ಹೊಸ ನೀತಿಯೊಂದನ್ನು ರೂಪಿಸಲು ಚಾಲನೆ ನೀಡಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.</p>.<p>ಗುವಾಹಟಿಯಲ್ಲಿ 8ನೇ ಕಾಮನ್ವೆಲ್ತ್ ಸಂಸದೀಯ ಸಂಘ ಏರ್ಪಡಿಸಿರುವ ‘ಮುಖ್ಯವಾಹಿನಿಯ ಯುವ ಕೇಂದ್ರಿತ ನೀತಿಗಳು’ ವಿಷಯ ಕುರಿತ ಸಮ್ಮೇಳನದಲ್ಲಿ ಸೋಮವಾರ ಮಾತನಾ<br />ಡಿದ ಅವರು, ಕರ್ನಾಟಕದಲ್ಲಿ15 ರಿಂದ 29 ವರ್ಷದೊಳಗಿನ ವಯಸ್ಸಿನವರು ಶೇ 30ರಿಂದ 40ರಷ್ಟು ಇದ್ದಾರೆ ಎಂದರು.</p>.<p>ಯುವ ಜನರು ಎದುರಿಸುತ್ತಿರುವ ಅಡ್ಡಿ– ಆತಂಕಗಳು ಮತ್ತು ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದರ ಜತೆಗೆ ಅವರಿಗೆ ದೈಹಿಕ, ಮಾನಸಿಕ ಮತ್ತು ಆರ್ಥಿಕ ನೆರವು ನೀಡಬೇಕು ಹಾಗೂ ಅವರ ನೈಜ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲು ಅವಕಾಶ ನೀಡಬೇಕು. ಈ ಉದ್ದೇಶದಿಂದ ‘ಕರ್ನಾಟಕ ಯುವ ನೀತಿ 2022’ ಅನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದು ಕಾಗೇರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>