ಪತ್ರಕರ್ತ ಆರ್ಜಿ ಹಳ್ಳಿ ನಾಗರಾಜ್ ಮಾತನಾಡಿ, ‘ಪುಟ್ಟಸ್ವಾಮಿ ಅವರು ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನ ಅಪರೂಪದ ಚಿಂತಕ. ಅವರ ಓದು, ಗ್ರಹಿಕೆ ತುಂಬಾ ಭಿನ್ನವಾಗಿತ್ತು. ಅವರು ಓದಿನ ಜ್ಞಾನವನ್ನು ಹಿಗ್ಗಿಸಿಕೊಳ್ಳಲು ಮಲೆ ಮಹದೇಶ್ವರ ಸಂಶೋಧನೆಗೆ ತೊಡಗಿದರು. ಶೈವ ಸಂಸ್ಕೃತಿಯ, ವಚನ ಸಾಹಿತ್ಯದ, ಜಾನಪದ ಸಾಹಿತ್ಯ... ಹೀಗೆ ಅನೇಕ ಕೃತಿಗಳನ್ನು ಗುಡ್ಡೆ ಹಾಕಿಕೊಂಡು ಓದಿ ಸಂಶೋಧನೆ ಕೃತಿ ರಚಿಸಿದ್ದಾರೆ’ ಎಂದು ಹೇಳಿದರು.