<p><strong>ಬೆಂಗಳೂರು:</strong> ‘ಹೆಣ್ಣಿಗೆ ಲೋಕದ ಬಂಧನ ದಾಟುವುದಕ್ಕಿಂತ ನಮಗೆ ನಾವೇ ಹಾಕಿಕೊಳ್ಳುವ ಬಂಧನ ಮಹಿಳಾ ಲೋಕದ ದೊಡ್ಡ ಸಮಸ್ಯೆ’ ಎಂದು ವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.</p>.<p>ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಚಿತ್ರಕಲಾ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿಮುಳ್ಳು’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕೆಲವು ತೊಡಕುಗಳನ್ನು ಮೀರುವ ಕೆಲಸವನ್ನು ದಯಾ ಗಂಗನಗಟ್ಟ ಅವರು ತಮ್ಮ ಕಥೆಗಳ ಮೂಲಕ ಮಾಡಿದ್ದಾರೆ. ಹೆಣ್ಣಿನ ದೃಷ್ಟಿಕೋನದಿಂದ ನೋಡಿದ ಕತೆಗಳು ಗೆದ್ದ ಕತೆಗಳಾಗಿವೆ ಎಂದು ಹೇಳಿದರು.</p>.<p>ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ, ‘ವಿನಯತೆ ಇಲ್ಲವಾಗಿ, ಉದಯೋನ್ಮುಖ ಎಂಬ ಪರಿಧಿ ಇಲ್ಲದ ಈ ಸಾಹಿತ್ಯ ಕಾಲಘಟ್ಟದಲ್ಲಿ ದಯಾ ಗಂಗನಗಟ್ಟ ಅವರ ಕತೆಗಳು ವಿನಯ ಹಾಗೂ ವಿದೇಯತೆಯ ಜೊತೆಗೆ ನಮ್ಮ ಮುಂದೆ ನಿಲ್ಲುತ್ತವೆ’ ಎಂದು ತಿಳಿಸಿದರು.</p>.<p>‘ಈ ಸಮಯದಲ್ಲಿ ಮಹಿಳಾ ಸಾಹಿತ್ಯ ಮುಂಚೂಣಿಗೆ ಬರುತ್ತಿವೆ. ಅದು ಪ್ರಖರವಾಗಿ ಎಲ್ಲೆಡೆ ಪ್ರಕಟವಾಗುತ್ತಿದೆ. ಧಾವಂತದ ವಾತಾವರಣವನ್ನು ಈಗಿನ ಸ್ಪರ್ಧೆಗಳು ರೂಪಿಸುತ್ತಿವೆ. ಈ ರೀತಿಯ ಧಾವಂತವನ್ನು ದಾಟಬೇಕಾದ ಅನಿವಾರ್ಯತೆ ಈ ಕಾಲದ ಕತೆಗಾರರಿಗೆ ಇದೆ’ ಎಂದು ಹಿರಿಯ ಸಾಹಿತಿ ಕೇಶವ ಮಳಗಿ ಅವರು ಹೇಳಿದರು. ಪ್ರಕಾಶಕ ಚಲಂ ಹಾಡ್ಲಹಳ್ಳಿ, ನಾಟಕಕಾರ ಬೇಲೂರು ರಘುನಂದನ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಹೆಣ್ಣಿಗೆ ಲೋಕದ ಬಂಧನ ದಾಟುವುದಕ್ಕಿಂತ ನಮಗೆ ನಾವೇ ಹಾಕಿಕೊಳ್ಳುವ ಬಂಧನ ಮಹಿಳಾ ಲೋಕದ ದೊಡ್ಡ ಸಮಸ್ಯೆ’ ಎಂದು ವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.</p>.<p>ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಚಿತ್ರಕಲಾ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿಮುಳ್ಳು’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕೆಲವು ತೊಡಕುಗಳನ್ನು ಮೀರುವ ಕೆಲಸವನ್ನು ದಯಾ ಗಂಗನಗಟ್ಟ ಅವರು ತಮ್ಮ ಕಥೆಗಳ ಮೂಲಕ ಮಾಡಿದ್ದಾರೆ. ಹೆಣ್ಣಿನ ದೃಷ್ಟಿಕೋನದಿಂದ ನೋಡಿದ ಕತೆಗಳು ಗೆದ್ದ ಕತೆಗಳಾಗಿವೆ ಎಂದು ಹೇಳಿದರು.</p>.<p>ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ, ‘ವಿನಯತೆ ಇಲ್ಲವಾಗಿ, ಉದಯೋನ್ಮುಖ ಎಂಬ ಪರಿಧಿ ಇಲ್ಲದ ಈ ಸಾಹಿತ್ಯ ಕಾಲಘಟ್ಟದಲ್ಲಿ ದಯಾ ಗಂಗನಗಟ್ಟ ಅವರ ಕತೆಗಳು ವಿನಯ ಹಾಗೂ ವಿದೇಯತೆಯ ಜೊತೆಗೆ ನಮ್ಮ ಮುಂದೆ ನಿಲ್ಲುತ್ತವೆ’ ಎಂದು ತಿಳಿಸಿದರು.</p>.<p>‘ಈ ಸಮಯದಲ್ಲಿ ಮಹಿಳಾ ಸಾಹಿತ್ಯ ಮುಂಚೂಣಿಗೆ ಬರುತ್ತಿವೆ. ಅದು ಪ್ರಖರವಾಗಿ ಎಲ್ಲೆಡೆ ಪ್ರಕಟವಾಗುತ್ತಿದೆ. ಧಾವಂತದ ವಾತಾವರಣವನ್ನು ಈಗಿನ ಸ್ಪರ್ಧೆಗಳು ರೂಪಿಸುತ್ತಿವೆ. ಈ ರೀತಿಯ ಧಾವಂತವನ್ನು ದಾಟಬೇಕಾದ ಅನಿವಾರ್ಯತೆ ಈ ಕಾಲದ ಕತೆಗಾರರಿಗೆ ಇದೆ’ ಎಂದು ಹಿರಿಯ ಸಾಹಿತಿ ಕೇಶವ ಮಳಗಿ ಅವರು ಹೇಳಿದರು. ಪ್ರಕಾಶಕ ಚಲಂ ಹಾಡ್ಲಹಳ್ಳಿ, ನಾಟಕಕಾರ ಬೇಲೂರು ರಘುನಂದನ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>