‘ಭಕ್ತಿಗೆ ಒಂದು ಶೀಲವಿದೆ. ಅದು ಒಂದು ಭೋಳೇತನದ, ಜವಾಬ್ದಾರಿ ರಹಿತವಾದ ಭಟ್ಟಂಗಿತನವಲ್ಲ. ಕರ್ತವ್ಯ ನಿರತನಾಗಿ ಏನನ್ನು ಮಾಡಬೇಕೋ ಅದನ್ನು ಮನುಷ್ಯ ಪ್ರಯತ್ನವಾಗಿ ಮಾಡಿ, ಉಳಿದದ್ದನ್ನು ಮಾನುಷ ಪ್ರಯತ್ನಕ್ಕೆ ಬಿಡುವುದೇ ಭಕ್ತಿಯ ಶೀಲ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ’ ಎಂಬುದರ ಅರ್ಥವೂ ಇದೇ ಆಗಿದೆ. ಕರ್ಮದಲ್ಲಿ ಲೋಪವಿಲ್ಲದೆ ನಿರ್ವಹಿಸಿ, ಫಲಾಫಲಗಳನ್ನು ದೈವಕ್ಕೆ ಬಿಡುವುದೇ ಭಕ್ತಿ’ ಎಂದು ತಿಳಿಸಿದರು.