<p><strong>ಬೆಂಗಳೂರು:</strong> ‘ಶ್ರೇಷ್ಠ ಲೇಖಕರು ಹಾಗೂ ಕವಿಗಳು ನಮ್ಮಲ್ಲಿ ಸಾಕಷ್ಟು ಇದ್ದಾರೆ. ಆದರೆ, ಪ್ರೊ.ಕೆ.ಎಸ್. ನಿಸಾರ್ ಅಹಮದ್ ಸೇರಿದಂತೆ ಕೆಲವರಷ್ಟೇ ತಮ್ಮ ಬರಹಗಳಿಂದ ಗ್ರಾಮೀಣ ಜನರನ್ನು ತಲುಪಿದ್ದಾರೆ’ ಎಂದುವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಹೇಳಿದರು.</p>.<p>ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಆಯ್ದ ಕವಿತೆಗಳ 5 ಅನುವಾದಿತ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ನಿಸಾರ್ ಅಹಮದ್ ವಿಶಿಷ್ಟ ಶೈಲಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಅವರ ಕವಿತೆಗಳು ಗ್ರಾಮೀಣ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಬರುವ ದಿನಗಳಲ್ಲಿ ಅವರನ್ನು ಕೇಂದ್ರವನ್ನಾಗಿಸಿಕೊಂಡು ಕವಿತೆಗಳ ಆಮೂಲಾಗ್ರ ಚರ್ಚೆ ನಡೆಯಬೇಕು’ ಎಂದು ತಿಳಿಸಿದರು.</p>.<p>ಉರ್ದು ಕವಿ ಖಲೀಲ್ ಮಾಮೂನ್, ‘ನಿತ್ಯೋತ್ಸವ ಕವಿತೆಯ ಮೂಲಕ ನಿಸಾರ್ ಅವರು ರಾಷ್ಟ್ರದ ಶ್ರೇಷ್ಠ ಕವಿಗಳ ಪಂಕ್ತಿಗೆ ಸೇರಿದ್ದಾರೆ. ‘ಕುರಿಗಳು, ಸಾರ್, ಕುರಿಗಳು’ ಕವನ ಅವರ ಪ್ರತಿಭೆ ಅನಾವರಣ ಮಾಡಿದೆ. ಇಂಥ ಕವನಗಳು ಎಲ್ಲ ಭಾಷೆಗಳಿಗೆ ಅನುವಾದವಾಗಬೇಕು’ ಎಂದರು.</p>.<p>ಲೇಖಕ ಸ.ರಘುನಾಥ, ‘ಕೆ.ಎಸ್.ನ ಅವರ ಕವಿತೆಗಳಲ್ಲಿ ಮಲ್ಲಿಗೆಯ ಕಂಪು ಇದ್ದ ಹಾಗೇ ನಿಸಾರ್ ಅಹಮದ್ ಅವರ ಕವಿತೆಗಳಲ್ಲಿ ತಾಳೆ ಹೂ (ಕೇದಿಗೆ) ಗಮವಿದೆ. ಕನ್ನಡ ಸಾಹಿತ್ಯದಲ್ಲಿ ನವ್ಯ ಮತ್ತು ನವೋದಯ ಕಾಲಘಟ್ಟದಲ್ಲಿ ಉದ್ಭವಿಸಿದ್ದ ಜಿದ್ದಾಜಿದ್ದಿ ತೆಲುಗು ಸಾಹಿತ್ಯದಲ್ಲೂ ಉಂಟಾಗಿತ್ತು’ ಎಂದರು.</p>.<p><strong>ಪುಸ್ತಕ: ಕಾಟ್ ಬಿಟ್ವೀನ್ ದಿ ವರ್ಲ್ಡ್ ಆಫ್ ಬೈನರೀಸ್ (ದ್ವಂದ್ವಗಳ ಲೋಕದಲ್ಲಿ ದ್ವಂದ್ವಾತೀತ ಶೋಧ)</strong></p>.<p>ಭಾಷೆ: ಇಂಗ್ಲಿಷ್</p>.<p>ಅನುವಾದಕ: ಪ್ರೊ.ಎಂ.ಎಸ್.ರಘುನಾಥ್</p>.<p>ಪುಟಗಳು: 252</p>.<p>ಬೆಲೆ: ₹ 310</p>.<p><br />ಪುಸ್ತಕ: ನಾ ಕವಿತಾಲ್ ಖದರೆ ವೇರು (ನನ್ನ ಕವಿತೆಗಳ ಖದರೇ ಬೇರೆ)</p>.<p>ಭಾಷೆ: ತೆಲುಗು</p>.<p>ಅನುವಾದಕ: ಸ. ರಘುನಾಥ</p>.<p>ಪುಟಗಳು: 244</p>.<p>ಬೆಲೆ: ₹275</p>.<p><br />ಪುಸ್ತಕ: ಮೇರಾ ಅಂದಾಜ್ ಬಯಾನ್ ಔರ್ (ನನ್ನ ಅಭಿವ್ಯಕ್ತಿಯ ರೀತಿಯೇ ಅನನ್ಯ)</p>.<p>ಭಾಷೆ: ಉರ್ದು</p>.<p>ಅನುವಾದಕ: ಮಾಹೇರ್ ಮನ್ಸೂರ್</p>.<p>ಪುಟಗಳು: 438</p>.<p>ಬೆಲೆ: ₹ 400</p>.<p><br />ಪುಸ್ತಕ: ನಿತ್ಯೋತ್ಸವ ಆ್ಯಂಡ್ ಅದರ್ ನಿಸಾರ್’ಸ್ ಪೋಯಮ್ಸ್ (ನಿತ್ಯೋತ್ಸವ ಮತ್ತು ನಿಸಾರ್ ಅವರ ಇತರ ಕವನಗಳು)</p>.<p>ಭಾಷೆ: ಹಿಂದಿ</p>.<p>ಅನುವಾದಕಿ: ಬಿ.ವೈ. ಲಲಿತಾಂಬ</p>.<p>ಪುಟಗಳು: 250</p>.<p>ಬೆಲೆ: ₹ 300</p>.<p><br />ಪುಸ್ತಕ: ನಿಸಾರ್ ಕವಿತೆಗಳ್ (ನಿಸಾರ್ ಕವಿತೆಗಳು)</p>.<p>ಭಾಷೆ: ಮಲಯಾಳಿ</p>.<p>ಅನುವಾದಕ: ಪಾರ್ವತಿ ಐತಾಳ್</p>.<p>ಪುಟಗಳು: 172</p>.<p>ಬೆಲೆ: ₹125.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಶ್ರೇಷ್ಠ ಲೇಖಕರು ಹಾಗೂ ಕವಿಗಳು ನಮ್ಮಲ್ಲಿ ಸಾಕಷ್ಟು ಇದ್ದಾರೆ. ಆದರೆ, ಪ್ರೊ.ಕೆ.ಎಸ್. ನಿಸಾರ್ ಅಹಮದ್ ಸೇರಿದಂತೆ ಕೆಲವರಷ್ಟೇ ತಮ್ಮ ಬರಹಗಳಿಂದ ಗ್ರಾಮೀಣ ಜನರನ್ನು ತಲುಪಿದ್ದಾರೆ’ ಎಂದುವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಹೇಳಿದರು.</p>.<p>ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಆಯ್ದ ಕವಿತೆಗಳ 5 ಅನುವಾದಿತ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ನಿಸಾರ್ ಅಹಮದ್ ವಿಶಿಷ್ಟ ಶೈಲಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಅವರ ಕವಿತೆಗಳು ಗ್ರಾಮೀಣ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಬರುವ ದಿನಗಳಲ್ಲಿ ಅವರನ್ನು ಕೇಂದ್ರವನ್ನಾಗಿಸಿಕೊಂಡು ಕವಿತೆಗಳ ಆಮೂಲಾಗ್ರ ಚರ್ಚೆ ನಡೆಯಬೇಕು’ ಎಂದು ತಿಳಿಸಿದರು.</p>.<p>ಉರ್ದು ಕವಿ ಖಲೀಲ್ ಮಾಮೂನ್, ‘ನಿತ್ಯೋತ್ಸವ ಕವಿತೆಯ ಮೂಲಕ ನಿಸಾರ್ ಅವರು ರಾಷ್ಟ್ರದ ಶ್ರೇಷ್ಠ ಕವಿಗಳ ಪಂಕ್ತಿಗೆ ಸೇರಿದ್ದಾರೆ. ‘ಕುರಿಗಳು, ಸಾರ್, ಕುರಿಗಳು’ ಕವನ ಅವರ ಪ್ರತಿಭೆ ಅನಾವರಣ ಮಾಡಿದೆ. ಇಂಥ ಕವನಗಳು ಎಲ್ಲ ಭಾಷೆಗಳಿಗೆ ಅನುವಾದವಾಗಬೇಕು’ ಎಂದರು.</p>.<p>ಲೇಖಕ ಸ.ರಘುನಾಥ, ‘ಕೆ.ಎಸ್.ನ ಅವರ ಕವಿತೆಗಳಲ್ಲಿ ಮಲ್ಲಿಗೆಯ ಕಂಪು ಇದ್ದ ಹಾಗೇ ನಿಸಾರ್ ಅಹಮದ್ ಅವರ ಕವಿತೆಗಳಲ್ಲಿ ತಾಳೆ ಹೂ (ಕೇದಿಗೆ) ಗಮವಿದೆ. ಕನ್ನಡ ಸಾಹಿತ್ಯದಲ್ಲಿ ನವ್ಯ ಮತ್ತು ನವೋದಯ ಕಾಲಘಟ್ಟದಲ್ಲಿ ಉದ್ಭವಿಸಿದ್ದ ಜಿದ್ದಾಜಿದ್ದಿ ತೆಲುಗು ಸಾಹಿತ್ಯದಲ್ಲೂ ಉಂಟಾಗಿತ್ತು’ ಎಂದರು.</p>.<p><strong>ಪುಸ್ತಕ: ಕಾಟ್ ಬಿಟ್ವೀನ್ ದಿ ವರ್ಲ್ಡ್ ಆಫ್ ಬೈನರೀಸ್ (ದ್ವಂದ್ವಗಳ ಲೋಕದಲ್ಲಿ ದ್ವಂದ್ವಾತೀತ ಶೋಧ)</strong></p>.<p>ಭಾಷೆ: ಇಂಗ್ಲಿಷ್</p>.<p>ಅನುವಾದಕ: ಪ್ರೊ.ಎಂ.ಎಸ್.ರಘುನಾಥ್</p>.<p>ಪುಟಗಳು: 252</p>.<p>ಬೆಲೆ: ₹ 310</p>.<p><br />ಪುಸ್ತಕ: ನಾ ಕವಿತಾಲ್ ಖದರೆ ವೇರು (ನನ್ನ ಕವಿತೆಗಳ ಖದರೇ ಬೇರೆ)</p>.<p>ಭಾಷೆ: ತೆಲುಗು</p>.<p>ಅನುವಾದಕ: ಸ. ರಘುನಾಥ</p>.<p>ಪುಟಗಳು: 244</p>.<p>ಬೆಲೆ: ₹275</p>.<p><br />ಪುಸ್ತಕ: ಮೇರಾ ಅಂದಾಜ್ ಬಯಾನ್ ಔರ್ (ನನ್ನ ಅಭಿವ್ಯಕ್ತಿಯ ರೀತಿಯೇ ಅನನ್ಯ)</p>.<p>ಭಾಷೆ: ಉರ್ದು</p>.<p>ಅನುವಾದಕ: ಮಾಹೇರ್ ಮನ್ಸೂರ್</p>.<p>ಪುಟಗಳು: 438</p>.<p>ಬೆಲೆ: ₹ 400</p>.<p><br />ಪುಸ್ತಕ: ನಿತ್ಯೋತ್ಸವ ಆ್ಯಂಡ್ ಅದರ್ ನಿಸಾರ್’ಸ್ ಪೋಯಮ್ಸ್ (ನಿತ್ಯೋತ್ಸವ ಮತ್ತು ನಿಸಾರ್ ಅವರ ಇತರ ಕವನಗಳು)</p>.<p>ಭಾಷೆ: ಹಿಂದಿ</p>.<p>ಅನುವಾದಕಿ: ಬಿ.ವೈ. ಲಲಿತಾಂಬ</p>.<p>ಪುಟಗಳು: 250</p>.<p>ಬೆಲೆ: ₹ 300</p>.<p><br />ಪುಸ್ತಕ: ನಿಸಾರ್ ಕವಿತೆಗಳ್ (ನಿಸಾರ್ ಕವಿತೆಗಳು)</p>.<p>ಭಾಷೆ: ಮಲಯಾಳಿ</p>.<p>ಅನುವಾದಕ: ಪಾರ್ವತಿ ಐತಾಳ್</p>.<p>ಪುಟಗಳು: 172</p>.<p>ಬೆಲೆ: ₹125.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>