<p><strong>ಬೆಂಗಳೂರು: </strong>‘ರಂಗಭಾಷೆಯ ಮೂಲಕ ಪ್ರತಿರೋಧವನ್ನು ದಾಖಲಿಸಿದ ಹಾಗೂ ಜನರ ಸಮಸ್ಯೆಗಳಿಗೆ ಬೀದಿ ನಾಟಕಗಳ ಮೂಲಕ ಧ್ವನಿ ಕೊಟ್ಟ ಸಫ್ದರ್ ಹಷ್ಮಿಯನ್ನು ಆಳುವ ಜನರು ಛೂಬಿಟ್ಟ ಗೂಂಡಾಗಳಿಂದ ದೆಹಲಿಯಲ್ಲಿ ಹತ್ಯೆ ಮಾಡಿದರು.ಸಫ್ದರ್ ತೋರಿಸಿದ ಪ್ರತಿರೋಧದ ಹಾದಿಯಲ್ಲೇ ರಂಗಭೂಮಿಯವರು ಸಾಗಬೇಕು’ ಎಂದುರಂಗಕರ್ಮಿ ಅರುಂಧತಿ ನಾಗ್ ತಿಳಿಸಿದರು.</p>.<p>ಸಮುದಾಯ ಸಾಂಸ್ಕೃತಿಕ ಸಂಘಟನೆಯು ರಂಗಶಂಕರದ ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಜಿ.ವೆಂಕಟೇಶ್ ಅವರು ಕನ್ನಡಕ್ಕೆ ಅನುವಾದಿಸಿರುವ ಸಫ್ದರ್ ಹಷ್ಮಿ ಸಾವು ಮತ್ತು ಬದುಕು ಕುರಿತ ‘ಹಲ್ಲಾಬೋಲ್’ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ದೇಶಕ್ಕೆ ಅನ್ನ ಕೊಡುವ ಲಕ್ಷಾಂತರ ರೈತರುದೆಹಲಿಯ ಹೊರವಲಯದಲ್ಲಿ ಕೊರೆಯುವ ಚಳಿಯಲ್ಲಿ ಜೀವದ ಹಂಗು ತೊರೆದು, ದೇಶದ ಕೃಷಿಯ ಉಳಿವಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಆದರೆ, ಆಳುವ ಸರ್ಕಾರ ಹೃದಯಹೀನವಾಗಿ ವರ್ತಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಜನನಾಟ್ಯ ಮಂಚ್ನ ಒಡನಾಟ ಹಾಗೂ ಪುಸ್ತಕದಲ್ಲಿನ ಹಬೀಬ್ ತನ್ವೀರ್ ಅವರ ಮಾತುಗಳು, ಬೀದಿ ನಾಟಕದ ಕುರಿತು ಸಫ್ದರ್ಗೆ ಇದ್ದ ಸ್ಪಷ್ಟತೆಯ ಕುರಿತುಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮಾತನಾಡಿದರು. ಅನುವಾದಕ ಎಂ.ಜಿ.ವೆಂಕಟೇಶ್ ಅವರು ಸಫ್ದರ್ ಹಷ್ಮಿಯವರ ಜೊತೆಗಿನ ನೆನಪುಗಳನ್ನು ತೆರೆದಿಟ್ಟರು.</p>.<p>ಸಮುದಾಯ ಬೆಂಗಳೂರು ತಂಡದ ಕಲಾವಿದರು ಸಫ್ದರ್ ಹಷ್ಮಿ ಅವರ ‘ಭಯೋತ್ಪಾದನೆಯ ನೆಪದಲ್ಲಿ’ ನಾಟಕದ ಆಯ್ದ ಭಾಗಗಳನ್ನು ಓದಿದರು. ಸಫ್ಧರ್ ಹಷ್ಮಿ ಮತ್ತು ಜನ ನಾಟ್ಯ ಮಂಚ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.</p>.<p>ಚಿಂತಕಿ ಡಾ.ವಿಜಯಾ, ನಿರ್ದೇಶಕ ಬಿ.ಸುರೇಶ್, ನಿವೃತ್ತ ನ್ಯಾಯಾಧೀಶರಾದ ಮಂಜುಳಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ರಂಗಭಾಷೆಯ ಮೂಲಕ ಪ್ರತಿರೋಧವನ್ನು ದಾಖಲಿಸಿದ ಹಾಗೂ ಜನರ ಸಮಸ್ಯೆಗಳಿಗೆ ಬೀದಿ ನಾಟಕಗಳ ಮೂಲಕ ಧ್ವನಿ ಕೊಟ್ಟ ಸಫ್ದರ್ ಹಷ್ಮಿಯನ್ನು ಆಳುವ ಜನರು ಛೂಬಿಟ್ಟ ಗೂಂಡಾಗಳಿಂದ ದೆಹಲಿಯಲ್ಲಿ ಹತ್ಯೆ ಮಾಡಿದರು.ಸಫ್ದರ್ ತೋರಿಸಿದ ಪ್ರತಿರೋಧದ ಹಾದಿಯಲ್ಲೇ ರಂಗಭೂಮಿಯವರು ಸಾಗಬೇಕು’ ಎಂದುರಂಗಕರ್ಮಿ ಅರುಂಧತಿ ನಾಗ್ ತಿಳಿಸಿದರು.</p>.<p>ಸಮುದಾಯ ಸಾಂಸ್ಕೃತಿಕ ಸಂಘಟನೆಯು ರಂಗಶಂಕರದ ಸಹಕಾರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಜಿ.ವೆಂಕಟೇಶ್ ಅವರು ಕನ್ನಡಕ್ಕೆ ಅನುವಾದಿಸಿರುವ ಸಫ್ದರ್ ಹಷ್ಮಿ ಸಾವು ಮತ್ತು ಬದುಕು ಕುರಿತ ‘ಹಲ್ಲಾಬೋಲ್’ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ದೇಶಕ್ಕೆ ಅನ್ನ ಕೊಡುವ ಲಕ್ಷಾಂತರ ರೈತರುದೆಹಲಿಯ ಹೊರವಲಯದಲ್ಲಿ ಕೊರೆಯುವ ಚಳಿಯಲ್ಲಿ ಜೀವದ ಹಂಗು ತೊರೆದು, ದೇಶದ ಕೃಷಿಯ ಉಳಿವಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಆದರೆ, ಆಳುವ ಸರ್ಕಾರ ಹೃದಯಹೀನವಾಗಿ ವರ್ತಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಜನನಾಟ್ಯ ಮಂಚ್ನ ಒಡನಾಟ ಹಾಗೂ ಪುಸ್ತಕದಲ್ಲಿನ ಹಬೀಬ್ ತನ್ವೀರ್ ಅವರ ಮಾತುಗಳು, ಬೀದಿ ನಾಟಕದ ಕುರಿತು ಸಫ್ದರ್ಗೆ ಇದ್ದ ಸ್ಪಷ್ಟತೆಯ ಕುರಿತುಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮಾತನಾಡಿದರು. ಅನುವಾದಕ ಎಂ.ಜಿ.ವೆಂಕಟೇಶ್ ಅವರು ಸಫ್ದರ್ ಹಷ್ಮಿಯವರ ಜೊತೆಗಿನ ನೆನಪುಗಳನ್ನು ತೆರೆದಿಟ್ಟರು.</p>.<p>ಸಮುದಾಯ ಬೆಂಗಳೂರು ತಂಡದ ಕಲಾವಿದರು ಸಫ್ದರ್ ಹಷ್ಮಿ ಅವರ ‘ಭಯೋತ್ಪಾದನೆಯ ನೆಪದಲ್ಲಿ’ ನಾಟಕದ ಆಯ್ದ ಭಾಗಗಳನ್ನು ಓದಿದರು. ಸಫ್ಧರ್ ಹಷ್ಮಿ ಮತ್ತು ಜನ ನಾಟ್ಯ ಮಂಚ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.</p>.<p>ಚಿಂತಕಿ ಡಾ.ವಿಜಯಾ, ನಿರ್ದೇಶಕ ಬಿ.ಸುರೇಶ್, ನಿವೃತ್ತ ನ್ಯಾಯಾಧೀಶರಾದ ಮಂಜುಳಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>