ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ವಿದ್ವತ್ತು, ವಿನಯ ಹಾಗೂ ವಿವೇಕಗಳ ಆಕೃತಿಯೇ ಈ ಕೃತಿಯಲ್ಲಿ ಗರ್ಭೀಕರಿಸಿಕೊಂಡಿದೆ. ಈಗ ಜನರು ಲೌಕಿಕ ಜಗತ್ತಿನಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಲೌಕಿಕತೆ ಮತ್ತು ಆಧ್ಯಾತ್ಮವನ್ನು ಸಮನ್ವಯಿಕರಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಕೃತಿ ತಿಳಿಸುತ್ತದೆ. ಈ ಹಾದಿಯಲ್ಲಿ ಸಾಗುವುದೇ ಜನರ ಜೀವನ ಕ್ರಮವಾಗಬೇಕು’ ಎಂದು ಕಿವಿಮಾತು ಹೇಳಿದರು.