<p>ಬೆಂಗಳೂರು: ‘ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಬ್ರಹ್ಮಯಾನ’ ಪುಸ್ತಕವು ಕನ್ನಡ ಆಧ್ಯಾತ್ಮ ಸಾಹಿತ್ಯದ ಅಮೂಲ್ಯ ಕೃತಿ. ಇದು ಮಹಾಲಿಂಗರಂಗ ಕವಿಯ ಅನುಭವಾಮೃತ ಶಾಸ್ತ್ರ ಗ್ರಂಥ ಮಾತ್ರವಲ್ಲ, ಉತ್ತಮ ಕಾವ್ಯವೂ ಆಗಿದೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ತಿಳಿಸಿದರು.</p>.<p>ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮತ್ತು ಉದಯ ಪ್ರಕಾಶನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಲೇಖಕರು ಮಹಾಲಿಂಗರಂಗನೊಂದಿಗೆ ಮುಖಾಮುಖಿಯಾಗಿ, ಆತನ ರೂಪಕ ಭಾಷೆಯಲ್ಲೇ ಅನುಕ್ತವಾದ ಆತ್ಮಾನುಸಂಧಾನದ ಪರಿಯನ್ನು ಸರಳವಾಗಿ ದಾಟಿಸುವ ಪ್ರಯತ್ನದಂತೆ ಈ ಕೃತಿ ರಚಿತವಾಗಿದೆ’ ಎಂದರು.</p>.<p>ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ವಿದ್ವತ್ತು, ವಿನಯ ಹಾಗೂ ವಿವೇಕಗಳ ಆಕೃತಿಯೇ ಈ ಕೃತಿಯಲ್ಲಿ ಗರ್ಭೀಕರಿಸಿಕೊಂಡಿದೆ. ಈಗ ಜನರು ಲೌಕಿಕ ಜಗತ್ತಿನಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಲೌಕಿಕತೆ ಮತ್ತು ಆಧ್ಯಾತ್ಮವನ್ನು ಸಮನ್ವಯಿಕರಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಕೃತಿ ತಿಳಿಸುತ್ತದೆ. ಈ ಹಾದಿಯಲ್ಲಿ ಸಾಗುವುದೇ ಜನರ ಜೀವನ ಕ್ರಮವಾಗಬೇಕು’ ಎಂದು ಕಿವಿಮಾತು ಹೇಳಿದರು. </p>.<p>‘ಅಂತರಂಗದ ಪ್ರಪಂಚ ತೆರೆದುಕೊಳ್ಳುವುದೇ ಆಧ್ಯಾತ್ಮ. ಆಧ್ಯಾತ್ಮದೆಡೆಗೆ ಸಾಗಲು ಅಗತ್ಯವಿರುವ ಶುದ್ಧೀಕರಣ ಪ್ರಕ್ರಿಯೆಯನ್ನು ಬ್ರಹ್ಮಯಾನ ಕೃತಿ ತಿಳಿಸಿಕೊಡುತ್ತದೆ. ವ್ಯವಹಾರಿಕ ಪ್ರಪಂಚ ಮನುಷ್ಯನನ್ನು ಸದಾ ಆಕರ್ಷಿಸುತ್ತಿರುತ್ತದೆ. ಅದರಿಂದ ಆಚೆ ಬಂದು ಪಾರಮಾರ್ಥಿಕದೆಡೆ ಸಾಗುವ ದಾರಿಯ ಬಗ್ಗೆ ಕವಿ ಮಹಾಲಿಂಗರಂಗ ಅವರು11 ಅಧ್ಯಾಯಗಳಲ್ಲಿ ತಿಳಿಸಿದ್ದಾರೆ. ಅದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ’ ಎಂದು ಲೇಖಕ ಮಲ್ಲೇಪುರಂ ಜಿ.ವೆಂಕಟೇಶ ತಿಳಿಸಿದರು.</p>.<p>‘ಜಗತ್ತು, ಜೀವ ಮತ್ತು ಈಶ್ವರ, ಈ ಮೂರರ ನಡುವಣ ಸಂಬಂಧ ಎಂತಹದ್ದು. ಈ ಜೀವ ಜಗತ್ತಿನಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗುವುದು ಹೇಗೆ? ಇಂತಹ ಅನೇಕ ಸ್ವಾರಸ್ಯಗಳನ್ನು ಕೃತಿ ಒಳಗೊಂಡಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಅವರಿಗೆ ‘ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಬ್ರಹ್ಮಯಾನ’ ಪುಸ್ತಕವು ಕನ್ನಡ ಆಧ್ಯಾತ್ಮ ಸಾಹಿತ್ಯದ ಅಮೂಲ್ಯ ಕೃತಿ. ಇದು ಮಹಾಲಿಂಗರಂಗ ಕವಿಯ ಅನುಭವಾಮೃತ ಶಾಸ್ತ್ರ ಗ್ರಂಥ ಮಾತ್ರವಲ್ಲ, ಉತ್ತಮ ಕಾವ್ಯವೂ ಆಗಿದೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ತಿಳಿಸಿದರು.</p>.<p>ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮತ್ತು ಉದಯ ಪ್ರಕಾಶನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಲೇಖಕರು ಮಹಾಲಿಂಗರಂಗನೊಂದಿಗೆ ಮುಖಾಮುಖಿಯಾಗಿ, ಆತನ ರೂಪಕ ಭಾಷೆಯಲ್ಲೇ ಅನುಕ್ತವಾದ ಆತ್ಮಾನುಸಂಧಾನದ ಪರಿಯನ್ನು ಸರಳವಾಗಿ ದಾಟಿಸುವ ಪ್ರಯತ್ನದಂತೆ ಈ ಕೃತಿ ರಚಿತವಾಗಿದೆ’ ಎಂದರು.</p>.<p>ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ವಿದ್ವತ್ತು, ವಿನಯ ಹಾಗೂ ವಿವೇಕಗಳ ಆಕೃತಿಯೇ ಈ ಕೃತಿಯಲ್ಲಿ ಗರ್ಭೀಕರಿಸಿಕೊಂಡಿದೆ. ಈಗ ಜನರು ಲೌಕಿಕ ಜಗತ್ತಿನಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಲೌಕಿಕತೆ ಮತ್ತು ಆಧ್ಯಾತ್ಮವನ್ನು ಸಮನ್ವಯಿಕರಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಕೃತಿ ತಿಳಿಸುತ್ತದೆ. ಈ ಹಾದಿಯಲ್ಲಿ ಸಾಗುವುದೇ ಜನರ ಜೀವನ ಕ್ರಮವಾಗಬೇಕು’ ಎಂದು ಕಿವಿಮಾತು ಹೇಳಿದರು. </p>.<p>‘ಅಂತರಂಗದ ಪ್ರಪಂಚ ತೆರೆದುಕೊಳ್ಳುವುದೇ ಆಧ್ಯಾತ್ಮ. ಆಧ್ಯಾತ್ಮದೆಡೆಗೆ ಸಾಗಲು ಅಗತ್ಯವಿರುವ ಶುದ್ಧೀಕರಣ ಪ್ರಕ್ರಿಯೆಯನ್ನು ಬ್ರಹ್ಮಯಾನ ಕೃತಿ ತಿಳಿಸಿಕೊಡುತ್ತದೆ. ವ್ಯವಹಾರಿಕ ಪ್ರಪಂಚ ಮನುಷ್ಯನನ್ನು ಸದಾ ಆಕರ್ಷಿಸುತ್ತಿರುತ್ತದೆ. ಅದರಿಂದ ಆಚೆ ಬಂದು ಪಾರಮಾರ್ಥಿಕದೆಡೆ ಸಾಗುವ ದಾರಿಯ ಬಗ್ಗೆ ಕವಿ ಮಹಾಲಿಂಗರಂಗ ಅವರು11 ಅಧ್ಯಾಯಗಳಲ್ಲಿ ತಿಳಿಸಿದ್ದಾರೆ. ಅದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ’ ಎಂದು ಲೇಖಕ ಮಲ್ಲೇಪುರಂ ಜಿ.ವೆಂಕಟೇಶ ತಿಳಿಸಿದರು.</p>.<p>‘ಜಗತ್ತು, ಜೀವ ಮತ್ತು ಈಶ್ವರ, ಈ ಮೂರರ ನಡುವಣ ಸಂಬಂಧ ಎಂತಹದ್ದು. ಈ ಜೀವ ಜಗತ್ತಿನಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗುವುದು ಹೇಗೆ? ಇಂತಹ ಅನೇಕ ಸ್ವಾರಸ್ಯಗಳನ್ನು ಕೃತಿ ಒಳಗೊಂಡಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಅವರಿಗೆ ‘ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>