<p><strong>ಬೆಂಗಳೂರು:</strong> ಬ್ರಾಹ್ಮಣ್ಯ ಎಂಬ ಒಳರಾಕ್ಷಸ ತಳ ಸಮುದಾಯಗಳ ಬೇರುಗಳನ್ನು ತುಂಡರಿಸುತ್ತಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.</p>.<p>ನೂರಕ್ಕೂ ಅಧಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಎಚ್.ಟಿ. ಪೋತೆ ಅವರಿಗೆ ಶನಿವಾರ ನಡೆದ ಅಭಿನಂದನಾ ಸಮಾರಂಭ, ವಿಚಾರ ಸಂಕಿರಣ, ಸಾಕ್ಷ್ಯಚಿತ್ರ ಪ್ರದರ್ಶನ, ಕಥಾ ಆಲಾಪ, ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾವಿರಾರು ವರ್ಷಗಳಿಂದ ಬ್ರಾಹ್ಮಣ್ಯ ಈ ಕೆಲಸ ಮಾಡಿಕೊಂಡು ಬಂದಿದ್ದು, ಇತ್ತೀಚೆಗೆ ಜಾಸ್ತಿಯಾಗಿದೆ. ಇದರ ವಿರುದ್ಧ ಬಹಿರಂಗವಾಗಿ ಮಾತನಾಡಬೇಕು. ವಿರೋಧಿಸಬೇಕು. ಆದರೆ, ಆಳುವ ವರ್ಗವೇ ಬ್ರಾಹ್ಮಣ್ಯಕ್ಕೆ ಹೆದರಿ ಕೂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ದೇಶವನ್ನು ವೈಜ್ಞಾನಿಕವಾಗಿ ಮುನ್ನಡೆಸಬೇಕು ಎಂದು ನಮ್ಮ ಸಂವಿಧಾನವೇ ಹೇಳಿದ್ದರೂ ಮೌಢ್ಯಗಳೇ ಆಳುತ್ತಿವೆ. ದೇಶ ಹಿಂದುಳಿಯಲು ಜಾತಿ ವ್ಯವಸ್ಥೆ ಮತ್ತು ಮೌಢ್ಯವೇ ಕಾರಣ ಎಂದು ವಿಶ್ಲೇಷಿಸಿದರು.</p>.<p>ದಲಿತ ಸಾಹಿತ್ಯವನ್ನು ಮೇಲ್ವರ್ಗದವರು ಓದುವುದಿಲ್ಲ. ಶಾಲೆಗಳಲ್ಲಿ ಪಠ್ಯವಾಗಿಯೂ ಇಲ್ಲ. ತುಳಿತಕ್ಕೆ ಒಳಗಾದವರ ನೋವು ಹೊರಜಗತ್ತಿಗೆ ಗೊತ್ತಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.</p>.<p>ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಬಗ್ಗೆ ಹಿಂದೆ ಆಕ್ರೋಶದಿಂದ ಬರೆಯುತ್ತಿದ್ದರು. ಆನಂತರದ ತಲೆಮಾರು ಆಕ್ರೋಶ ಬಿಟ್ಟು ತಳಸಮುದಾಯಗಳ ತಲ್ಲಣವನ್ನು ಕಟ್ಟಿಕೊಡುವ ಬರಹದಲ್ಲಿ ತೊಡಗಿಸಿಕೊಂಡಿತು. ಪೋತೆ ಅವರು ಈ ಸಾಲಿಗೆ ಸೇರಿದ ಬರಹಗಾರ. ಅಂಬೇಡ್ಕರ್ ಮೂಲಕ ಸಾಹಿತ್ಯವನ್ನು ನೋಡಿದವರು ಎಂದು ಅಭಿಪ್ರಾಯಪಟ್ಟರು.</p>.<p>ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಗೂರು ಶ್ರೀರಾಮುಲು, ಸಪ್ನ ಬುಕ್ ಹೌಸ್ ಮಾಲೀಕ ನಿತಿನ್ ಷಾ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬ್ರಾಹ್ಮಣ್ಯ ಎಂಬ ಒಳರಾಕ್ಷಸ ತಳ ಸಮುದಾಯಗಳ ಬೇರುಗಳನ್ನು ತುಂಡರಿಸುತ್ತಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.</p>.<p>ನೂರಕ್ಕೂ ಅಧಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಎಚ್.ಟಿ. ಪೋತೆ ಅವರಿಗೆ ಶನಿವಾರ ನಡೆದ ಅಭಿನಂದನಾ ಸಮಾರಂಭ, ವಿಚಾರ ಸಂಕಿರಣ, ಸಾಕ್ಷ್ಯಚಿತ್ರ ಪ್ರದರ್ಶನ, ಕಥಾ ಆಲಾಪ, ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾವಿರಾರು ವರ್ಷಗಳಿಂದ ಬ್ರಾಹ್ಮಣ್ಯ ಈ ಕೆಲಸ ಮಾಡಿಕೊಂಡು ಬಂದಿದ್ದು, ಇತ್ತೀಚೆಗೆ ಜಾಸ್ತಿಯಾಗಿದೆ. ಇದರ ವಿರುದ್ಧ ಬಹಿರಂಗವಾಗಿ ಮಾತನಾಡಬೇಕು. ವಿರೋಧಿಸಬೇಕು. ಆದರೆ, ಆಳುವ ವರ್ಗವೇ ಬ್ರಾಹ್ಮಣ್ಯಕ್ಕೆ ಹೆದರಿ ಕೂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ದೇಶವನ್ನು ವೈಜ್ಞಾನಿಕವಾಗಿ ಮುನ್ನಡೆಸಬೇಕು ಎಂದು ನಮ್ಮ ಸಂವಿಧಾನವೇ ಹೇಳಿದ್ದರೂ ಮೌಢ್ಯಗಳೇ ಆಳುತ್ತಿವೆ. ದೇಶ ಹಿಂದುಳಿಯಲು ಜಾತಿ ವ್ಯವಸ್ಥೆ ಮತ್ತು ಮೌಢ್ಯವೇ ಕಾರಣ ಎಂದು ವಿಶ್ಲೇಷಿಸಿದರು.</p>.<p>ದಲಿತ ಸಾಹಿತ್ಯವನ್ನು ಮೇಲ್ವರ್ಗದವರು ಓದುವುದಿಲ್ಲ. ಶಾಲೆಗಳಲ್ಲಿ ಪಠ್ಯವಾಗಿಯೂ ಇಲ್ಲ. ತುಳಿತಕ್ಕೆ ಒಳಗಾದವರ ನೋವು ಹೊರಜಗತ್ತಿಗೆ ಗೊತ್ತಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.</p>.<p>ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಬಗ್ಗೆ ಹಿಂದೆ ಆಕ್ರೋಶದಿಂದ ಬರೆಯುತ್ತಿದ್ದರು. ಆನಂತರದ ತಲೆಮಾರು ಆಕ್ರೋಶ ಬಿಟ್ಟು ತಳಸಮುದಾಯಗಳ ತಲ್ಲಣವನ್ನು ಕಟ್ಟಿಕೊಡುವ ಬರಹದಲ್ಲಿ ತೊಡಗಿಸಿಕೊಂಡಿತು. ಪೋತೆ ಅವರು ಈ ಸಾಲಿಗೆ ಸೇರಿದ ಬರಹಗಾರ. ಅಂಬೇಡ್ಕರ್ ಮೂಲಕ ಸಾಹಿತ್ಯವನ್ನು ನೋಡಿದವರು ಎಂದು ಅಭಿಪ್ರಾಯಪಟ್ಟರು.</p>.<p>ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಗೂರು ಶ್ರೀರಾಮುಲು, ಸಪ್ನ ಬುಕ್ ಹೌಸ್ ಮಾಲೀಕ ನಿತಿನ್ ಷಾ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>