‘ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ನೀಡಿ 14 ವರ್ಷಗಳಾಗಿವೆ. ಇಂದಿಗೂ ಕನ್ನಡಕ್ಕೆ ಸ್ವಾಯತ್ತತೆ ಮತ್ತು ಸವಲತ್ತುಗಳು ದೊರೆತಿಲ್ಲ.ಶಾಸ್ತ್ರೀಯ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಇಲ್ಲ. ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರೂ ಒಗ್ಗಟ್ಟಿನಿಂದ ಮಳೆಗಾಲದ ಅಧಿವೇಶನದಲ್ಲಿ ಧ್ವನಿಯೆತ್ತಿ, ಶಾಸ್ತ್ರೀಯ ಕನ್ನಡ ಭಾಷೆಯ ವನವಾಸವನ್ನು ಕೊನೆಗೊಳಿಸಬೇಕು.ನಮ್ಮ ಸಂಸದರು ಚಂದ್ರ ಆರ್ಯ ಅವರನ್ನು ಅಭಿನಂದಿಸಿದರೆ ಸಾಲದು, ಅವರನ್ನು ಅನುಸರಿಸಬೇಕು’ ಎಂದು ಬಳಗದ ಸಂಚಾಲಕರಾ.ನಂ. ಚಂದ್ರಶೇಖರ ಒತ್ತಾಯಿಸಿದ್ದಾರೆ.