ನಗರದಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ ಜೈಪುರದ ಕೇಂಬ್ರಿಡ್ಜ್ ಕೋರ್ಟ್ ಪ್ರೌಢಶಾಲೆಯ ಅದಿತಿ ಸಿಂಗ್ ಮತ್ತು ಹಿತೇಶ್ ಪ್ರಥಮ ಸ್ಥಾನ ಪಡೆದರು. ಕೊಚ್ಚಿಯ ಗ್ರೆಗೋರಿಯನ್ ಪಬ್ಲಿಕ್ ಶಾಲೆಯ ಯೆಲ್ಧೋ ಶೆಮ್ ಮ್ಯಾಥ್ಯೂ ಮತ್ತು ಶ್ರೇಯಸ್ ಎಸ್. ವಾರಿಯರ್ ದ್ವಿತೀಯ ಸ್ಥಾನ, ಕೋಲ್ಕತ್ತದ ಸೇಂಟ್ ಅಗಸ್ಟೀನ್ ಡೇ ಸ್ಕೂಲ್ನ ಅಯಾನ್ ತೌಕ್ವಿರ್ ಮತ್ತು ಶೈಕ್ ಅಹ್ಮದ್ ತೃತೀಯ ಸ್ಥಾನ ಪಡೆದರು. ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹60 ಸಾವಿರ ಮತ್ತು ತೃತೀಯ ಬಹುಮಾನವಾಗಿ ₹ 40 ಸಾವಿರ ಹಾಗೂ ಟ್ರೋಫಿಯನ್ನು ವಿಜೇತ ತಂಡಗಳಿಗೆ ನೀಡಲಾಯಿತು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 22 ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದವು. ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರು.