<p><strong>ಬೆಂಗಳೂರು:</strong> ಬಾಡಿಗೆ ಪಡೆಯುವ ನೆಪದಲ್ಲಿ ಕಾರೊಂದನ್ನು ಕಳ್ಳತನ ಮಾಡಿದ್ದ ಆರೋಪದಡಿ ಕರಣ್ಕುಮಾರ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.</p>.<p>‘ಕತ್ರಿಗುಪ್ಪೆ ನಿವಾಸಿ ಕರಣ್ಕುಮಾರ್ ಜ. 1ರಂದು ದಾಸನಪುರದ ಅರುಣ್ಕುಮಾರ್ ಎಂಬುವರ ಕಾರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕರಣ್ನನ್ನು ಬಂಧಿಸಿ, ಆತನಿಂದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಅರುಣ್ಕುಮಾರ್ ಅವರು ಟ್ರಾವೆಲ್ಸ್ ಏಜೆನ್ಸಿಯಡಿ ಕಾರು ಓಡಿಸುತ್ತಿದ್ದಾರೆ. ಜಸ್ಟ್ ಡಯಲ್ ಜಾಲತಾಣದಿಂದ ಮಾಹಿತಿ ಪಡೆದುಕೊಂಡು ಏಜೆನ್ಸಿಯವರನ್ನು ಸಂಪರ್ಕಿಸಿದ್ದ ಆರೋಪಿ, ಮೈಸೂರು ಪ್ರವಾಸಕ್ಕೆ ಹೋಗಲು ಕಾರು ಬಾಡಿಗೆಗೆ ಬೇಕೆಂದು ಹೇಳಿದ್ದ. ಏಜೆನ್ಸಿಯವರು ಅರುಣ್ಕುಮಾರ್ ಅವರನ್ನು ಕಾರು ಸಮೇತ ಆರೋಪಿ ಹೇಳಿದ್ದ ಸ್ಥಳಕ್ಕೆ ಕಳುಹಿಸಿದ್ದರು.’</p>.<p>‘ಮೈಸೂರು ರಸ್ತೆಯ ಹೋಟೆಲೊಂದರ ಬಳಿ ಅರುಣ್ಕುಮಾರ್ ಅವರನ್ನು ಭೇಟಿಯಾಗಿ ಕಾರಿನೊಳಗೆ ಕುಳಿತಿದ್ದ ಆರೋಪಿ, ‘ಹೋಟೆಲ್ನಲ್ಲಿ ನನ್ನ ಸ್ನೇಹಿತ ಇದ್ದಾನೆ. ಆತ ₹10 ಸಾವಿರ ಕೊಡುತ್ತಾನೆ. ತೆಗೆದುಕೊಂಡು ಬಾ’ ಎಂದು ಹೇಳಿ ಕಳುಹಿಸಿದ್ದ. ಅತ್ತ ಅರುಣ್ಕುಮಾರ್ ಹೋಟೆಲ್ ಒಳಗೆ ಹೋಗುತ್ತಿದ್ದಂತೆ ಕಾರಿನ ಸಮೇತ ಆರೋಪಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.</p>.<p class="Subhead"><strong>ಎರಡು ಕಡೆ ಕೃತ್ಯ: </strong>‘ಅರುಣ್ಕುಮಾರ್ ಅವರ ₹22 ಲಕ್ಷ ಮೌಲ್ಯದ ಕಾರು ಕದ್ದಿದ್ದ ಆರೋಪಿ ಕರಣ್ಕುಮಾರ್, ಅದೇ ದಿನ ಮತ್ತೊಂದು ಕಾರು ಕದ್ದಿದ್ದಾನೆ. ಎರಡೂ ಕಾರನ್ನು ಮಾರಾಟ ಮಾಡಲೆಂದು ತುಮಕೂರಿನಲ್ಲಿ ಇಟ್ಟಿದ್ದ. ಅವುಗಳನ್ನೇ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಾಡಿಗೆ ಪಡೆಯುವ ನೆಪದಲ್ಲಿ ಕಾರೊಂದನ್ನು ಕಳ್ಳತನ ಮಾಡಿದ್ದ ಆರೋಪದಡಿ ಕರಣ್ಕುಮಾರ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.</p>.<p>‘ಕತ್ರಿಗುಪ್ಪೆ ನಿವಾಸಿ ಕರಣ್ಕುಮಾರ್ ಜ. 1ರಂದು ದಾಸನಪುರದ ಅರುಣ್ಕುಮಾರ್ ಎಂಬುವರ ಕಾರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕರಣ್ನನ್ನು ಬಂಧಿಸಿ, ಆತನಿಂದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಅರುಣ್ಕುಮಾರ್ ಅವರು ಟ್ರಾವೆಲ್ಸ್ ಏಜೆನ್ಸಿಯಡಿ ಕಾರು ಓಡಿಸುತ್ತಿದ್ದಾರೆ. ಜಸ್ಟ್ ಡಯಲ್ ಜಾಲತಾಣದಿಂದ ಮಾಹಿತಿ ಪಡೆದುಕೊಂಡು ಏಜೆನ್ಸಿಯವರನ್ನು ಸಂಪರ್ಕಿಸಿದ್ದ ಆರೋಪಿ, ಮೈಸೂರು ಪ್ರವಾಸಕ್ಕೆ ಹೋಗಲು ಕಾರು ಬಾಡಿಗೆಗೆ ಬೇಕೆಂದು ಹೇಳಿದ್ದ. ಏಜೆನ್ಸಿಯವರು ಅರುಣ್ಕುಮಾರ್ ಅವರನ್ನು ಕಾರು ಸಮೇತ ಆರೋಪಿ ಹೇಳಿದ್ದ ಸ್ಥಳಕ್ಕೆ ಕಳುಹಿಸಿದ್ದರು.’</p>.<p>‘ಮೈಸೂರು ರಸ್ತೆಯ ಹೋಟೆಲೊಂದರ ಬಳಿ ಅರುಣ್ಕುಮಾರ್ ಅವರನ್ನು ಭೇಟಿಯಾಗಿ ಕಾರಿನೊಳಗೆ ಕುಳಿತಿದ್ದ ಆರೋಪಿ, ‘ಹೋಟೆಲ್ನಲ್ಲಿ ನನ್ನ ಸ್ನೇಹಿತ ಇದ್ದಾನೆ. ಆತ ₹10 ಸಾವಿರ ಕೊಡುತ್ತಾನೆ. ತೆಗೆದುಕೊಂಡು ಬಾ’ ಎಂದು ಹೇಳಿ ಕಳುಹಿಸಿದ್ದ. ಅತ್ತ ಅರುಣ್ಕುಮಾರ್ ಹೋಟೆಲ್ ಒಳಗೆ ಹೋಗುತ್ತಿದ್ದಂತೆ ಕಾರಿನ ಸಮೇತ ಆರೋಪಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.</p>.<p class="Subhead"><strong>ಎರಡು ಕಡೆ ಕೃತ್ಯ: </strong>‘ಅರುಣ್ಕುಮಾರ್ ಅವರ ₹22 ಲಕ್ಷ ಮೌಲ್ಯದ ಕಾರು ಕದ್ದಿದ್ದ ಆರೋಪಿ ಕರಣ್ಕುಮಾರ್, ಅದೇ ದಿನ ಮತ್ತೊಂದು ಕಾರು ಕದ್ದಿದ್ದಾನೆ. ಎರಡೂ ಕಾರನ್ನು ಮಾರಾಟ ಮಾಡಲೆಂದು ತುಮಕೂರಿನಲ್ಲಿ ಇಟ್ಟಿದ್ದ. ಅವುಗಳನ್ನೇ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>