ಕೊಮ್ಮಘಟ್ಟ ರಸ್ತೆ ವೃತ್ತದಿಂದ ಮುದ್ದಯ್ಯನಪಾಳ್ಯ ಜಂಕ್ಷನ್ ತನಕದ ಸ್ಥಿತಿ ಇದು. ಕಾವೇರಿ ಕುಡಿಯುವ ನೀರು ಸರಬರಾಜು 4ನೇ ಹಂತದ ಯೋಜನೆಯಡಿ ಹೊಸ ಬೈರೋಹಳ್ಳಿ ಬಳಿಯ ನೆಲ ಜಲಸಂಗ್ರಹ ಕೇಂದ್ರದಿಂದ ಯಲಹಂಕದವರೆಗೆ 65 ಕಿ.ಮೀ. ಉದ್ದಕ್ಕೂ ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಚೆನ್ನಾಗಿದ್ದ ರಸ್ತೆಯನ್ನು ಈ ಕಾಮಗಾರಿಗೆ ಅಗೆದು ಬಿಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ.