<p><strong>ಬೆಂಗಳೂರು: </strong>ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ ವಿಳಾಸ ಬಳಸಿಕೊಂಡು ಸ್ವಿಗ್ಗಿ ಆ್ಯಪ್ನಲ್ಲಿ ಆಹಾರ ಆರ್ಡರ್ ಮಾಡಿದ್ದ ದುಷ್ಕರ್ಮಿಗಳು, ಆಹಾರ ಡೆಲಿವರಿ ಮಾಡಲು ಬಂದಿದ್ದ ಎಚ್.ವಿ. ಮಧು ಎಂಬುವರನ್ನು ಸುಲಿಗೆ ಮಾಡಿದ್ದಾರೆ.</p>.<p>ಈ ಸಂಬಂಧ ಕಾಮಾಕ್ಷಿಪಾಳ್ಯದ ರಂಗನಾಥಪುರದ ಮಧು ಅವರು ಕಾಟನ್ಪೇಟೆ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಇದೇ 3ರಂದು ಆ್ಯಪ್ನಲ್ಲಿ ಆಹಾರ ಆರ್ಡರ್ ಮಾಡಿದ್ದ ಅಜರುದ್ದೀನ್ ಎಂಬಾತ, ‘ಬೆಂಗಳೂರು ಸಿಸಿಬಿ ಕಚೇರಿ, ಸುಲ್ತಾನ್ಪೇಟೆ’ ಎಂಬ ವಿಳಾಸ ನೀಡಿದ್ದ. ಅದರಂತೆ ಆಹಾರ ತೆಗೆದುಕೊಂಡು ಸಂಜೆ 4ಕ್ಕೆ ಸಿಸಿಬಿ ಕಚೇರಿ ಬಳಿ ಹೋಗಿದ್ದೆ’ ಎಂದು ಮಧು ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಸಿಸಿಬಿ ಕಚೇರಿ ಸಮೀಪದಲ್ಲೇ ನಿಂತು ಅಜರುದ್ದೀನ್ಗೆ ಕರೆ ಮಾಡಿದ್ದೆ. ಕಚೇರಿ ಬಳಿಯ ಗ್ಯಾಸ್ ಏಜೆನ್ಸಿಯೊಂದರ ಬಳಿ ಇರುವುದಾಗಿ ಆತ ಹೇಳಿದ್ದ. ಸ್ಥಳಕ್ಕೆ ಹೋಗಿ ಆಹಾರ ನೀಡಲು ಮುಂದಾಗಿದ್ದೆ. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದ ಆತ, ಆರ್ಡರ್ ರದ್ದುಪಡಿಸುವುದಾಗಿ ಹೇಳಿ ಮೊಬೈಲ್ ನೋಡಲಾರಂಭಿಸಿದ್ದ’</p>.<p>‘ಕೆಲ ನಿಮಿಷದಲ್ಲೇ ನನ್ನ ಬೈಕ್ನ ಹ್ಯಾಂಡಲ್ನ ಹೋಲ್ಡರ್ನಲ್ಲಿ ಇಟ್ಟಿದ್ದ ₹12 ಸಾವಿರ ಮೌಲ್ಯದ ಮೊಬೈಲ್ನ್ನು ಕಿತ್ತುಕೊಂಡು ಓಡಿಹೋದ. ಆತನ ಜೊತೆಗಿದ್ದ ಮತ್ತೊಬ್ಬ ಆರೋಪಿ ಸಹ ಪರಾರಿಯಾದ’ ಎಂದು ಮಧು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಕಾಟನ್ಪೇಟೆ ಪೊಲೀಸರು, ‘ಸಿಸಿಬಿ ಕಚೇರಿ ಹೆಸರು ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಲಾಗಿದೆ. ಇದರಲ್ಲಿ ಸ್ಥಳೀಯ ಯುವಕರು ಭಾಗಿಯಾಗಿರುವ ಅನುಮಾನವಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ ವಿಳಾಸ ಬಳಸಿಕೊಂಡು ಸ್ವಿಗ್ಗಿ ಆ್ಯಪ್ನಲ್ಲಿ ಆಹಾರ ಆರ್ಡರ್ ಮಾಡಿದ್ದ ದುಷ್ಕರ್ಮಿಗಳು, ಆಹಾರ ಡೆಲಿವರಿ ಮಾಡಲು ಬಂದಿದ್ದ ಎಚ್.ವಿ. ಮಧು ಎಂಬುವರನ್ನು ಸುಲಿಗೆ ಮಾಡಿದ್ದಾರೆ.</p>.<p>ಈ ಸಂಬಂಧ ಕಾಮಾಕ್ಷಿಪಾಳ್ಯದ ರಂಗನಾಥಪುರದ ಮಧು ಅವರು ಕಾಟನ್ಪೇಟೆ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಇದೇ 3ರಂದು ಆ್ಯಪ್ನಲ್ಲಿ ಆಹಾರ ಆರ್ಡರ್ ಮಾಡಿದ್ದ ಅಜರುದ್ದೀನ್ ಎಂಬಾತ, ‘ಬೆಂಗಳೂರು ಸಿಸಿಬಿ ಕಚೇರಿ, ಸುಲ್ತಾನ್ಪೇಟೆ’ ಎಂಬ ವಿಳಾಸ ನೀಡಿದ್ದ. ಅದರಂತೆ ಆಹಾರ ತೆಗೆದುಕೊಂಡು ಸಂಜೆ 4ಕ್ಕೆ ಸಿಸಿಬಿ ಕಚೇರಿ ಬಳಿ ಹೋಗಿದ್ದೆ’ ಎಂದು ಮಧು ದೂರಿನಲ್ಲಿ ತಿಳಿಸಿದ್ದಾರೆ.</p>.<p>‘ಸಿಸಿಬಿ ಕಚೇರಿ ಸಮೀಪದಲ್ಲೇ ನಿಂತು ಅಜರುದ್ದೀನ್ಗೆ ಕರೆ ಮಾಡಿದ್ದೆ. ಕಚೇರಿ ಬಳಿಯ ಗ್ಯಾಸ್ ಏಜೆನ್ಸಿಯೊಂದರ ಬಳಿ ಇರುವುದಾಗಿ ಆತ ಹೇಳಿದ್ದ. ಸ್ಥಳಕ್ಕೆ ಹೋಗಿ ಆಹಾರ ನೀಡಲು ಮುಂದಾಗಿದ್ದೆ. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದ ಆತ, ಆರ್ಡರ್ ರದ್ದುಪಡಿಸುವುದಾಗಿ ಹೇಳಿ ಮೊಬೈಲ್ ನೋಡಲಾರಂಭಿಸಿದ್ದ’</p>.<p>‘ಕೆಲ ನಿಮಿಷದಲ್ಲೇ ನನ್ನ ಬೈಕ್ನ ಹ್ಯಾಂಡಲ್ನ ಹೋಲ್ಡರ್ನಲ್ಲಿ ಇಟ್ಟಿದ್ದ ₹12 ಸಾವಿರ ಮೌಲ್ಯದ ಮೊಬೈಲ್ನ್ನು ಕಿತ್ತುಕೊಂಡು ಓಡಿಹೋದ. ಆತನ ಜೊತೆಗಿದ್ದ ಮತ್ತೊಬ್ಬ ಆರೋಪಿ ಸಹ ಪರಾರಿಯಾದ’ ಎಂದು ಮಧು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಕಾಟನ್ಪೇಟೆ ಪೊಲೀಸರು, ‘ಸಿಸಿಬಿ ಕಚೇರಿ ಹೆಸರು ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಲಾಗಿದೆ. ಇದರಲ್ಲಿ ಸ್ಥಳೀಯ ಯುವಕರು ಭಾಗಿಯಾಗಿರುವ ಅನುಮಾನವಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>