‘ಇಲ್ಲಿರುವ ಕೆಲವು ಮರಗಳು ಬೆಳೆದು ದೊಡ್ಡದಾಗಿವೆ. ಒಂದೆರಡು ಮರಗಳು ಇನ್ನೂ ಬೆಳೆಯುತ್ತಿವೆ. ಅವುಗಳ ಸುತ್ತಲೂ ಎರಡರಿಂದ ಮೂರು ಅಡಿ ಜಾಗ ಬಿಡಬೇಕು. ಇದರಿಂದ ನೀರು ನಿಲ್ಲುವುದಕ್ಕೆ, ಇಂಗುವುದಕ್ಕೆ ಮತ್ತು ಬೇರುಗಳು ಬೆಳೆಯುವುದಕ್ಕೆ ಅನುಕೂಲ
ವಾಗುತ್ತದೆ. ಆದರೆ, ಅವುಗಳ ಬೆಳಣಿಗೆಗೆ ಕುಂಟಿತಗೊಳಿಸುವ ರೀತಿಯಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸುತ್ತಿರುವ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲದಿರುವುದು ದುರಂತವೇ ಸರಿ’ ಎಂದು ಪರಿಸರ ಪ್ರೇಮಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.