<p><strong>ಬೆಂಗಳೂರು: </strong>‘ನನ್ನ ಶಿಕ್ಷಣಕ್ಕೆ ಹಣವಿಲ್ಲ , ನನಗೆ ಮುಂದೆ ಓದಲು ಸಹಕರಿಸಿ...' ಎಂದು ಬರೆದಿರುವ ಹಾಳೆಗಳನ್ನು, ಕರಪತ್ರಗಳನ್ನು ಹಿಡಿದು ಕೆಲವು ಮಕ್ಕಳು ನಗರದ ಕೆಲವು ಭಾಗಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ.</p>.<p>‘ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷೆ ಬೇಡಿಸಲಾಗುತ್ತಿದೆ. ಈ ರೀತಿ ಮಕ್ಕಳನ್ನುಭಿಕ್ಷೆಗೆ ಬಳಸಿಕೊಳ್ಳುವುದು ಅವರ ಹಕ್ಕುಗಳ ಉಲ್ಲಂಘನೆ. ಮಕ್ಕಳ ನ್ಯಾಯ (ರಕ್ಷಣೆ - ಪೋಷಣೆ ) ಕಾಯ್ದೆ 2015 ರ ವಿಭಾಗ 76 ಮಕ್ಕಳನ್ನು ಭಿಕ್ಷೆ ಬೇಡಲು ಬಳಸಿದರೆ ಶಿಕ್ಷೆ ವಿಧಿಸಬೇಕು ಎಂಬ ಅಂಶವಿದೆ’ ಎನ್ನುತ್ತಾರೆ ಚೈಲ್ಡ್ ರೈಟ್ಸ್ ಟ್ರಸ್ಟ್ನ ನಾಗಸಿಂಹ ಜಿ. ರಾವ್.</p>.<p>‘ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮಕ್ಕಳು ಹಣ ಕೇಳಿದರೆ, ಸಾರ್ವಜನಿಕರು ಹಣ ನೀಡಿಯೇ ನೀಡುತ್ತಾರೆ. ಆದರೆ, ಈ ರೀತಿ ಮಾಡಬಾರದು.ಮಕ್ಕಳು ನಗರದ ಯಾವುದೇ ರಸ್ತೆ ,ವೃತ್ತದಲ್ಲಿ ಭಿಕ್ಷೆ ಬೇಡುತಿದ್ದರೆ ಸಾರ್ವಜನಿಕರು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿದರೆ ಮಕ್ಕಳನ್ನು ರಕ್ಷಿಸಲಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಮಕ್ಕಳು ಶಿಕ್ಷಣ ಹೆಸರಿನಲ್ಲಿ ಬೇಡುತ್ತಿರುವುದನ್ನು ಕುರಿತು ಮಾಹಿತಿಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ , ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ನನ್ನ ಶಿಕ್ಷಣಕ್ಕೆ ಹಣವಿಲ್ಲ , ನನಗೆ ಮುಂದೆ ಓದಲು ಸಹಕರಿಸಿ...' ಎಂದು ಬರೆದಿರುವ ಹಾಳೆಗಳನ್ನು, ಕರಪತ್ರಗಳನ್ನು ಹಿಡಿದು ಕೆಲವು ಮಕ್ಕಳು ನಗರದ ಕೆಲವು ಭಾಗಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ.</p>.<p>‘ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷೆ ಬೇಡಿಸಲಾಗುತ್ತಿದೆ. ಈ ರೀತಿ ಮಕ್ಕಳನ್ನುಭಿಕ್ಷೆಗೆ ಬಳಸಿಕೊಳ್ಳುವುದು ಅವರ ಹಕ್ಕುಗಳ ಉಲ್ಲಂಘನೆ. ಮಕ್ಕಳ ನ್ಯಾಯ (ರಕ್ಷಣೆ - ಪೋಷಣೆ ) ಕಾಯ್ದೆ 2015 ರ ವಿಭಾಗ 76 ಮಕ್ಕಳನ್ನು ಭಿಕ್ಷೆ ಬೇಡಲು ಬಳಸಿದರೆ ಶಿಕ್ಷೆ ವಿಧಿಸಬೇಕು ಎಂಬ ಅಂಶವಿದೆ’ ಎನ್ನುತ್ತಾರೆ ಚೈಲ್ಡ್ ರೈಟ್ಸ್ ಟ್ರಸ್ಟ್ನ ನಾಗಸಿಂಹ ಜಿ. ರಾವ್.</p>.<p>‘ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮಕ್ಕಳು ಹಣ ಕೇಳಿದರೆ, ಸಾರ್ವಜನಿಕರು ಹಣ ನೀಡಿಯೇ ನೀಡುತ್ತಾರೆ. ಆದರೆ, ಈ ರೀತಿ ಮಾಡಬಾರದು.ಮಕ್ಕಳು ನಗರದ ಯಾವುದೇ ರಸ್ತೆ ,ವೃತ್ತದಲ್ಲಿ ಭಿಕ್ಷೆ ಬೇಡುತಿದ್ದರೆ ಸಾರ್ವಜನಿಕರು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿದರೆ ಮಕ್ಕಳನ್ನು ರಕ್ಷಿಸಲಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಮಕ್ಕಳು ಶಿಕ್ಷಣ ಹೆಸರಿನಲ್ಲಿ ಬೇಡುತ್ತಿರುವುದನ್ನು ಕುರಿತು ಮಾಹಿತಿಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ , ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>