‘ಬೆಳಿಗ್ಗೆ 5 ಗಂಟೆ ಸುಮಾರಿಗೆ ನಾನು ಅಂಗಳಕ್ಕೆ ನೀರು ಹಾಕುತ್ತಿದ್ದೆ. ಆಗ ಮನೆಯಿಂದ ಸ್ವಲ್ಪ ದೂರದ ಕ್ರಾಸ್ನಲ್ಲಿ ಕಾರು ನಿಂತಿತ್ತು. ಅದರಲ್ಲಿ ಮೂವರು ಇದ್ದರು. ಸ್ವಲ್ಪ ಸಮಯದ ಬಳಿಕ ಕಾರಿನಿಂದ ಇಳಿದು ನನ್ನ ಬಳಿ ಬಂದ ಇಬ್ಬರು, ಚಾಕುವಿನಿಂದ ಬೆದರಿಸಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದರು. ನಾನು ಕಿರುಚಿಕೊಂಡಾಗ ಪತಿ ಅನಿಲ್ ಕುಮಾರ್ ರಕ್ಷಣೆಗೆ ಧಾವಿಸಿದರು’ ಎಂದು ಮಾಲತಿ ವಿವರಿಸಿದ್ದಾರೆ.