ಈ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದು, ‘ನಾಲ್ಕು ವರ್ಷಗಳ ಹಿಂದೆ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಯಡಿಯೂರು ವಾರ್ಡ್ನಲ್ಲಿ ಇದೇ ಟೆಂಡರ್ಶ್ಯೂರ್ ಯೋಜನೆಯಡಿ ಐದು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಆ ರಸ್ತೆಗಳು ಈಗಲೂ ಸುಸ್ಥಿತಿಯಲ್ಲಿದೆ. ಆದರೆ, 700 ಮೀಟರ್ ಉದ್ದ ಚರ್ಚ್ ಸ್ಟ್ರೀಟ್ ಅಭಿವೃದ್ಧಿಗೆ ₹18 ಕೋಟಿ ವೆಚ್ಚ ಮಾಡಲಾಗಿದೆ. ಈ ರಸ್ತೆ ಆಗಾಗ್ಗೆ ಹಾಳಾಗುತ್ತಲೇ ಇದೆ’ ಎಂದಿದ್ದಾರೆ.