<p><strong>ದೇಶವ್ಯಾಪಿ ಮುಷ್ಕರ ಫೆ. 12ಕ್ಕೆ</strong></p>.<p>ವಿಜಯಪುರ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆ ಹಿಂಪಡೆಯುವಂತೆ ಆಗ್ರಹಿಸಿ ಫೆ. 12ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಸಿಐಟಿಯು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ತಿಳಿಸಿದರು.</p><p>‘ಸಂಘಟಿತ, ಅಸಂಘಟಿತ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ಯುವಜನ, ವಿದ್ಯಾರ್ಥಿ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಕಾರ್ಮಿಕರು ಹಾಗೂ ಕಾರ್ಮಿಕರ ಸಂಘಟನೆಗಳ ಅಭಿಪ್ರಾಯ ಪಡೆಯದೇ ಕಾರ್ಮಿಕ ನಿಯಮಗಳನ್ನು ರೂಪಿಸುತ್ತಿದೆ. ಆದ್ದರಿಂದ ಪ್ರಧಾನಿ ಮೋದಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ’ ಎಂದು ಹೇಳಿದರು. </p>.<p><strong>22ನೇ ಹಸ್ತಪ್ರತಿ ಸಮ್ಮೇಳನ</strong></p>.<p>ಬಾಗಲಕೋಟೆ: ‘ಹಸ್ತಪ್ರತಿಗಳು ನಾಡಿನ ಆಸ್ತಿ. ರಾಜ್ಯ ಸರ್ಕಾರವು ಕಂದಾಯ ವಿಭಾಗ<br>ಕ್ಕೊಂದು ಹಸ್ತಪ್ರತಿಗಳ ಸಂಗ್ರಹಾಲಯ ತೆರೆಯುವುದರ ಜೊತೆಗೆ ಹಸ್ತಪ್ರತಿ ಅಧ್ಯಯನ ಕೇಂದ್ರ ಆರಂಭಿಸಬೇಕು’ ಎಂದು ಸಾಹಿತಿ ಪ್ರೊ. ಮಲ್ಲೇಪುರಂ ವೆಂಕಟೇಶ ಹೇಳಿದರು.</p><p>ಹಂಪಿ ಕನ್ನಡ ವಿ.ವಿ ಹಸ್ತಪ್ರತಿಶಾಸ್ತ್ರ ವಿಭಾಗ ಮತ್ತು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆರಂಭಗೊಂಡ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸರ್ಕಾರವು ಹಸ್ತಪ್ರತಿಯ ಸರ್ವೇಕ್ಷಣೆ, ಸಂಗ್ರಹಣೆ, ಸಂರಕ್ಷಣೆಗೆ ಮುಂದಾಗಬೇಕು’ ಎಂದರು.</p><p>‘ಅನುದಾನರಹಿತ ಹಸ್ತಪ್ರತಿ ಭಂಡಾರಗಳಿಗೆ ಸಂಗ್ರಹ, ಸಂರಕ್ಷಣೆ, ಪೋಷಣೆ ಮತ್ತು ಪ್ರಕಟಣೆಗೆ ಪ್ರತಿ ವರ್ಷ ಬಜೆಟ್ನಲ್ಲಿ ಅನುದಾನ ತೆಗೆದಿರಿಸಬೇಕು’ ಎಂದು ಹೇಳಿದರು.</p><p>‘ಪ್ರಾಚೀನ ಹಸ್ತಪ್ರತಿಗಳ ಮೂಲಕ ಜ್ಞಾನ ಪರಂಪರೆ ಅರಿಯಬಹುದು ಮತ್ತು ಸಂರಕ್ಷಿಸಬಹುದು. ಈಗಿನ ಕಾಲದ ಶ್ರೇಷ್ಠ ಕವಿಗಳು ಮತ್ತು ವಿದ್ವಾಂಸರ ಪ್ರಾತಿನಿಧಿಕ ಬರಹಗಳನ್ನೂ ಆ ಸಂಗ್ರಹಾಲಯಗಳು ಒಳಗೊಂಡಿರಬೇಕು’ ಎಂದರು.</p>.<h3>ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ</h3>.<p>ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘದಿಂದ 2025ನೇ ಸಾಲಿನ ‘ಪುಸ್ತಕ ಬಹುಮಾನ’ಕ್ಕೆ ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.</p><p>2025ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕಾದಂಬರಿ, ಅನುವಾದ, ಮಹಿಳಾ ಸಾಹಿತ್ಯ, ಅಂಕಣ ಬರಹ, ನಾಟಕ, ಪ್ರವಾಸ ಸಾಹಿತ್ಯ, ಕವನ ಸಂಕಲನ ಸೇರಿದಂತೆ ಒಟ್ಟು 12 ವಿಭಾಗಗಳಲ್ಲಿ ಕೃತಿಗಳನ್ನು ಕಳುಹಿಸಬಹುದು.</p><p>ಬಹುಮಾನಕ್ಕೆ ಕಳುಹಿಸುವ ಕೃತಿಗಳು ಮರು ಮುದ್ರಣ ಆಗಿರಬಾರದು. ಹಸ್ತಪ್ರತಿ, ಸಂಪಾದಿತ ಕೃತಿಗಳಿಗೆ ಅವಕಾಶ ಇಲ್ಲ. ಈ ಹಿಂದೆ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಬಹುಮಾನಕ್ಕೆ ಒಟ್ಟು 4 ಪುಸ್ತಕ ಕಳುಹಿಸಬೇಕು. ಕೃತಿ ಕಳುಹಿಸಲು ಮಾರ್ಚ್ 31 ಕಡೆಯ ದಿನ.</p><p>ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಕೋರಿಯರ್ ಅಥವಾ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಸಲ್ಲಿಸಬೇಕು. ಆಯ್ಕೆಯಾದ ಕೃತಿಗಳಿಗೆ ₹10,000 ನಗದು ಬಹುಮಾನವಿದೆ. ಮಾಹಿತಿಗೆ 9980159696 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇಶವ್ಯಾಪಿ ಮುಷ್ಕರ ಫೆ. 12ಕ್ಕೆ</strong></p>.<p>ವಿಜಯಪುರ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆ ಹಿಂಪಡೆಯುವಂತೆ ಆಗ್ರಹಿಸಿ ಫೆ. 12ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಸಿಐಟಿಯು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ತಿಳಿಸಿದರು.</p><p>‘ಸಂಘಟಿತ, ಅಸಂಘಟಿತ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ಯುವಜನ, ವಿದ್ಯಾರ್ಥಿ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಕಾರ್ಮಿಕರು ಹಾಗೂ ಕಾರ್ಮಿಕರ ಸಂಘಟನೆಗಳ ಅಭಿಪ್ರಾಯ ಪಡೆಯದೇ ಕಾರ್ಮಿಕ ನಿಯಮಗಳನ್ನು ರೂಪಿಸುತ್ತಿದೆ. ಆದ್ದರಿಂದ ಪ್ರಧಾನಿ ಮೋದಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ’ ಎಂದು ಹೇಳಿದರು. </p>.<p><strong>22ನೇ ಹಸ್ತಪ್ರತಿ ಸಮ್ಮೇಳನ</strong></p>.<p>ಬಾಗಲಕೋಟೆ: ‘ಹಸ್ತಪ್ರತಿಗಳು ನಾಡಿನ ಆಸ್ತಿ. ರಾಜ್ಯ ಸರ್ಕಾರವು ಕಂದಾಯ ವಿಭಾಗ<br>ಕ್ಕೊಂದು ಹಸ್ತಪ್ರತಿಗಳ ಸಂಗ್ರಹಾಲಯ ತೆರೆಯುವುದರ ಜೊತೆಗೆ ಹಸ್ತಪ್ರತಿ ಅಧ್ಯಯನ ಕೇಂದ್ರ ಆರಂಭಿಸಬೇಕು’ ಎಂದು ಸಾಹಿತಿ ಪ್ರೊ. ಮಲ್ಲೇಪುರಂ ವೆಂಕಟೇಶ ಹೇಳಿದರು.</p><p>ಹಂಪಿ ಕನ್ನಡ ವಿ.ವಿ ಹಸ್ತಪ್ರತಿಶಾಸ್ತ್ರ ವಿಭಾಗ ಮತ್ತು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆರಂಭಗೊಂಡ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸರ್ಕಾರವು ಹಸ್ತಪ್ರತಿಯ ಸರ್ವೇಕ್ಷಣೆ, ಸಂಗ್ರಹಣೆ, ಸಂರಕ್ಷಣೆಗೆ ಮುಂದಾಗಬೇಕು’ ಎಂದರು.</p><p>‘ಅನುದಾನರಹಿತ ಹಸ್ತಪ್ರತಿ ಭಂಡಾರಗಳಿಗೆ ಸಂಗ್ರಹ, ಸಂರಕ್ಷಣೆ, ಪೋಷಣೆ ಮತ್ತು ಪ್ರಕಟಣೆಗೆ ಪ್ರತಿ ವರ್ಷ ಬಜೆಟ್ನಲ್ಲಿ ಅನುದಾನ ತೆಗೆದಿರಿಸಬೇಕು’ ಎಂದು ಹೇಳಿದರು.</p><p>‘ಪ್ರಾಚೀನ ಹಸ್ತಪ್ರತಿಗಳ ಮೂಲಕ ಜ್ಞಾನ ಪರಂಪರೆ ಅರಿಯಬಹುದು ಮತ್ತು ಸಂರಕ್ಷಿಸಬಹುದು. ಈಗಿನ ಕಾಲದ ಶ್ರೇಷ್ಠ ಕವಿಗಳು ಮತ್ತು ವಿದ್ವಾಂಸರ ಪ್ರಾತಿನಿಧಿಕ ಬರಹಗಳನ್ನೂ ಆ ಸಂಗ್ರಹಾಲಯಗಳು ಒಳಗೊಂಡಿರಬೇಕು’ ಎಂದರು.</p>.<h3>ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ</h3>.<p>ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘದಿಂದ 2025ನೇ ಸಾಲಿನ ‘ಪುಸ್ತಕ ಬಹುಮಾನ’ಕ್ಕೆ ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.</p><p>2025ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕಾದಂಬರಿ, ಅನುವಾದ, ಮಹಿಳಾ ಸಾಹಿತ್ಯ, ಅಂಕಣ ಬರಹ, ನಾಟಕ, ಪ್ರವಾಸ ಸಾಹಿತ್ಯ, ಕವನ ಸಂಕಲನ ಸೇರಿದಂತೆ ಒಟ್ಟು 12 ವಿಭಾಗಗಳಲ್ಲಿ ಕೃತಿಗಳನ್ನು ಕಳುಹಿಸಬಹುದು.</p><p>ಬಹುಮಾನಕ್ಕೆ ಕಳುಹಿಸುವ ಕೃತಿಗಳು ಮರು ಮುದ್ರಣ ಆಗಿರಬಾರದು. ಹಸ್ತಪ್ರತಿ, ಸಂಪಾದಿತ ಕೃತಿಗಳಿಗೆ ಅವಕಾಶ ಇಲ್ಲ. ಈ ಹಿಂದೆ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಬಹುಮಾನಕ್ಕೆ ಒಟ್ಟು 4 ಪುಸ್ತಕ ಕಳುಹಿಸಬೇಕು. ಕೃತಿ ಕಳುಹಿಸಲು ಮಾರ್ಚ್ 31 ಕಡೆಯ ದಿನ.</p><p>ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಕೋರಿಯರ್ ಅಥವಾ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಸಲ್ಲಿಸಬೇಕು. ಆಯ್ಕೆಯಾದ ಕೃತಿಗಳಿಗೆ ₹10,000 ನಗದು ಬಹುಮಾನವಿದೆ. ಮಾಹಿತಿಗೆ 9980159696 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>