<p><strong>ಬೆಂಗಳೂರು:</strong> ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಪುಣೆಯ ಸಿಂಬೋಸಿಸ್ ಲಾ ಸ್ಕೂಲ್ ಜಯಗಳಿಸಿದೆ.</p>.<p>ನಗರದ ಸಿಎಂಆರ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಿತು.</p>.<p>ದೇಶದ ವಿವಿಧ ಭಾಗಗಳಿಂದ 24 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳುಭಾಗವಹಿಸಿದ್ದರು.</p>.<p><strong>ವಿಜೇತರ ವಿವರ:</strong> ಪ್ರವೀಣ್ ಗಾಂಧಿ ಕಾಲೇಜು ಮುಂಬೈ (ರನ್ನರ್), ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಪಟ್ನಾ (ಬೆಸ್ಟ್ ಮೆಮೋ ಪ್ರಶಸ್ತಿ), ಮಿಸ್ತಿ ಸೇಠ್, ಸಿಂಬೋಸಿಸ್ ಲಾ ಸ್ಕೂಲ್ ಹೈದರಾಬಾದ್ (ಉತ್ತಮ ವಿದ್ಯಾರ್ಥಿ ವಕೀಲೆ ಪ್ರಶಸ್ತಿ) ಪುಣೆಯ ವಿಜೇತ ತಂಡಕ್ಕೆ ₹25 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ವಿಜೇತ ತಂಡಕ್ಕೆ ₹15 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.</p>.<p>ಬೆಸ್ಟ್ ಮೆಮೋ ಪ್ರಶಸ್ತಿ ಮತ್ತು ಉತ್ತಮ ವಿದ್ಯಾರ್ಥಿ ವಕೀಲೆ ಬಹುಮಾನ ವಿಜೇತರಿಗೆ ತಲಾ ₹5 ಸಾವಿರ ನಗದು ಬಹುಮಾನ ನೀಡಲಾಯಿತು.</p>.<p><strong>ಸುಸ್ತಿದಾರನೇ ಬ್ಯಾಂಕ್ ಸಿಇಒ: ಆಕ್ಷೇಪ</strong></p>.<p><strong>ಬೆಂಗಳೂರು:</strong> ಸುಸ್ತಿದಾರನನ್ನೇ ಸಹಕಾರ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿಸಿದ್ದಕ್ಕೆ ರೈತರು ಆಕ್ಷೇಪಿಸಿದ್ದಾರೆ.</p>.<p>ಹೆಸರಘಟ್ಟ ಗ್ರಾಮದ ರೈತರ ಸೇವಾ ಸಹಕಾರ ಸಂಘದಲ್ಲಿ ಸಿಬ್ಬಂದಿ ಸಾಲದ ಪಟ್ಟಿಯಲ್ಲಿ ಹಾಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಅವರು ಪಡೆದ₹7 ಲಕ್ಷ ಮೌಲ್ಯದ ಆಭರಣ ಸಾಲವು ಕಂತು ಪಾವತಿಸದೇ ಸುಸ್ತಿಯಾಗಿದೆ. ಪುರುಷೋತ್ತಮ ಅವರು ಈ ಹಿಂದೆ ದ್ವಿತೀಯ ದರ್ಜೆ ಸಹಾಯಕರಾಗಿದ್ದರು. ಆಗ ಸಂಘದಲ್ಲಿ ಸಾಲ ಪಡೆದಿದ್ದ ಅವರು 2014ರಿಂದ 2018ರ ತನಕ ಬಡ್ಡಿ ರೂಪವಾಗಿ ₹ 2,95,795ಗಳನ್ನು ಕಟ್ಟಬೇಕಾಗಿತ್ತು. ಅಸಲು, ಬಡ್ಡಿ ಯಾವುದನ್ನೂ ಅವರು ಪಾವತಿಸಿಲ್ಲ. ಅವರನ್ನೇ ಸಿಇಒ ಹುದ್ದೆಗೇರಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಯೇ ಹೀಗೆ ಸುಸ್ತಿಯಾದರೆ ಉಳಿದವರ ಪಾಡು ಏನು? ಎಂದು ರೈತರು ಪ್ರಶ್ನಿಸಿದ್ದಾರೆ.</p>.<p>ಯಲಹಂಕ ಉತ್ತರ ವಲಯದ ಸಹಕಾರ ಸಂಘಗಳ ನಿರೀಕ್ಷಕರಾದ ಸುಂದರರಾಜು ಜೆ.ಟಿ. ಪ್ರತಿಕ್ರಿಯಿಸಿ ‘ಆಭರಣಗಳ ಮೇಲೆ ತೆಗೆದುಕೊಂಡ ಸಾಲವನ್ನು 12 ತಿಂಗಳ ಒಳಗೆ ಕಟ್ಟದಿದ್ದರೆ ಆಭರಣಗಳನ್ನು ಹರಾಜು ಹಾಕಬೇಕು. ಇಷ್ಟು ವರ್ಷಗಳ ಕಾಲ ಸುಮ್ಮನೆ ಇಟ್ಟುಕೊಂಡಿದ್ದು ತಪ್ಪು. ಆಡಳಿತ ಮಂಡಳಿಗೆ ಈ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಪುಣೆಯ ಸಿಂಬೋಸಿಸ್ ಲಾ ಸ್ಕೂಲ್ ಜಯಗಳಿಸಿದೆ.</p>.<p>ನಗರದ ಸಿಎಂಆರ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಿತು.</p>.<p>ದೇಶದ ವಿವಿಧ ಭಾಗಗಳಿಂದ 24 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳುಭಾಗವಹಿಸಿದ್ದರು.</p>.<p><strong>ವಿಜೇತರ ವಿವರ:</strong> ಪ್ರವೀಣ್ ಗಾಂಧಿ ಕಾಲೇಜು ಮುಂಬೈ (ರನ್ನರ್), ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಪಟ್ನಾ (ಬೆಸ್ಟ್ ಮೆಮೋ ಪ್ರಶಸ್ತಿ), ಮಿಸ್ತಿ ಸೇಠ್, ಸಿಂಬೋಸಿಸ್ ಲಾ ಸ್ಕೂಲ್ ಹೈದರಾಬಾದ್ (ಉತ್ತಮ ವಿದ್ಯಾರ್ಥಿ ವಕೀಲೆ ಪ್ರಶಸ್ತಿ) ಪುಣೆಯ ವಿಜೇತ ತಂಡಕ್ಕೆ ₹25 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ವಿಜೇತ ತಂಡಕ್ಕೆ ₹15 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.</p>.<p>ಬೆಸ್ಟ್ ಮೆಮೋ ಪ್ರಶಸ್ತಿ ಮತ್ತು ಉತ್ತಮ ವಿದ್ಯಾರ್ಥಿ ವಕೀಲೆ ಬಹುಮಾನ ವಿಜೇತರಿಗೆ ತಲಾ ₹5 ಸಾವಿರ ನಗದು ಬಹುಮಾನ ನೀಡಲಾಯಿತು.</p>.<p><strong>ಸುಸ್ತಿದಾರನೇ ಬ್ಯಾಂಕ್ ಸಿಇಒ: ಆಕ್ಷೇಪ</strong></p>.<p><strong>ಬೆಂಗಳೂರು:</strong> ಸುಸ್ತಿದಾರನನ್ನೇ ಸಹಕಾರ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿಸಿದ್ದಕ್ಕೆ ರೈತರು ಆಕ್ಷೇಪಿಸಿದ್ದಾರೆ.</p>.<p>ಹೆಸರಘಟ್ಟ ಗ್ರಾಮದ ರೈತರ ಸೇವಾ ಸಹಕಾರ ಸಂಘದಲ್ಲಿ ಸಿಬ್ಬಂದಿ ಸಾಲದ ಪಟ್ಟಿಯಲ್ಲಿ ಹಾಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಅವರು ಪಡೆದ₹7 ಲಕ್ಷ ಮೌಲ್ಯದ ಆಭರಣ ಸಾಲವು ಕಂತು ಪಾವತಿಸದೇ ಸುಸ್ತಿಯಾಗಿದೆ. ಪುರುಷೋತ್ತಮ ಅವರು ಈ ಹಿಂದೆ ದ್ವಿತೀಯ ದರ್ಜೆ ಸಹಾಯಕರಾಗಿದ್ದರು. ಆಗ ಸಂಘದಲ್ಲಿ ಸಾಲ ಪಡೆದಿದ್ದ ಅವರು 2014ರಿಂದ 2018ರ ತನಕ ಬಡ್ಡಿ ರೂಪವಾಗಿ ₹ 2,95,795ಗಳನ್ನು ಕಟ್ಟಬೇಕಾಗಿತ್ತು. ಅಸಲು, ಬಡ್ಡಿ ಯಾವುದನ್ನೂ ಅವರು ಪಾವತಿಸಿಲ್ಲ. ಅವರನ್ನೇ ಸಿಇಒ ಹುದ್ದೆಗೇರಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಯೇ ಹೀಗೆ ಸುಸ್ತಿಯಾದರೆ ಉಳಿದವರ ಪಾಡು ಏನು? ಎಂದು ರೈತರು ಪ್ರಶ್ನಿಸಿದ್ದಾರೆ.</p>.<p>ಯಲಹಂಕ ಉತ್ತರ ವಲಯದ ಸಹಕಾರ ಸಂಘಗಳ ನಿರೀಕ್ಷಕರಾದ ಸುಂದರರಾಜು ಜೆ.ಟಿ. ಪ್ರತಿಕ್ರಿಯಿಸಿ ‘ಆಭರಣಗಳ ಮೇಲೆ ತೆಗೆದುಕೊಂಡ ಸಾಲವನ್ನು 12 ತಿಂಗಳ ಒಳಗೆ ಕಟ್ಟದಿದ್ದರೆ ಆಭರಣಗಳನ್ನು ಹರಾಜು ಹಾಕಬೇಕು. ಇಷ್ಟು ವರ್ಷಗಳ ಕಾಲ ಸುಮ್ಮನೆ ಇಟ್ಟುಕೊಂಡಿದ್ದು ತಪ್ಪು. ಆಡಳಿತ ಮಂಡಳಿಗೆ ಈ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>