ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಡಿಗೇರ ವೀರೇಶ ಎಸ್ಸೆಸ್ಸೆಲ್ಸಿ ಮುಗಿದ ನಂತರ ಮೂರು ವರ್ಷ ಶಿಕ್ಷಣದಿಂದ ದೂರ ಇದ್ದರು. ಕುಟುಂಬದ ವೃತ್ತಿಯಾದ ಬಡಗಿತನದ ಇನ್ನೊಂದು ರೂಪವಾದ ಗ್ಲಾಸ್ ಡಿಸೈನಿಂಗ್ ಅಂಗಡಿ ನಡೆಸುತ್ತಲೇ ಮೂರು ವರ್ಷಗಳ ತರುವಾಯ ಪಿಯು ಮುಗಿಸಿ, ಪದವಿ ವ್ಯಾಸಂಗ ಮಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಸಾಹಸಿ.