‘ಶೀಲಾ ಅವರು ಗುರುವಾರ ತಮ್ಮ ಸಹೋದ್ಯೋಗಿಗಳ ಜತೆಗೆ ಹೋಟೆಲ್ಗೆ ಊಟಕ್ಕೆ ತೆರಳಿದ್ದರು. ರೋಟಿ ಹಾಗೂ ಪನ್ನೀರ್ ಗ್ರೇವಿಗೆ ಆರ್ಡರ್ ಮಾಡಿದ್ದರು. ಪನ್ನೀರ್ ಗ್ರೇವಿಯಲ್ಲಿ ಜಿರಳೆ ಕಂಡು ಬಂದಿತ್ತು. ವಕೀಲೆ ಹಾಗೂ ಇತರೆ ಗ್ರಾಹಕರು ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಪ್ರಶ್ನಿಸಿದ್ದರು. ಅದಾದ ಮೇಲೆ ಬೇರೆ ಊಟ ಕೊಡುತ್ತೇವೆ ಎಂದು ಸಿಬ್ಬಂದಿ ಹೇಳಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಬಳಿಕ, ಅಡುಗೆ ಕೋಣೆಯನ್ನು ಪರಿಶೀಲಿಸಿದಾಗ ಅಲ್ಲೂ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿತ್ತು.’