‘ನನ್ನ ಸ್ನೇಹಿತ, ಅವಸರದಲ್ಲಿ ಕ್ಯಾಬ್ ನಲ್ಲಿ ಮೊಬೈಲ್ ಬಿಟ್ಟು ಇಳಿದಿದ್ದರು. ಚಾಲಕ, ಸ್ಥಳದಿಂದ ಹೊರಟು ಹೋಗಿದ್ದ. ಚಾಲಕನ ಬಳಿ ಮೊಬೈಲ್ ಇತ್ತು. ಎಷ್ಟೇ ಪ್ರಯತ್ನಿಸಿದ್ದರೂ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸ್ನೇಹಿತ ಹಾಗೂ ನಾನು, ಬೆಳ್ಳಂದೂರು ಠಾಣೆಗೆ ಹೋಗಿ ಅಲ್ಲಿಯ ಸಿಬ್ಬಂದಿಗೆ ಘಟನೆ ಬಗ್ಗೆ ತಿಳಿಸಿದ್ದೆವು. ಚಾಲಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು, ವಿಚಾರಣೆ ನಡೆಸಿದ್ದರು. ನಮಗೆ ಮರುದಿನ ಬರುವಂತೆ ಹೇಳಿ ಕಳುಹಿಸಿದ್ದರು’ ಎಂದು ಯುವತಿ ತಿಳಿಸಿದ್ದಾರೆ.