‘ನಾವು ಬೀದಿ ನಾಯಿಯೊಂದನ್ನು ಒಂದು ವರ್ಷದಿಂದ ಸಾಕುತ್ತಿದ್ದೇವೆ. ಅದು ಮನೆಯಲ್ಲೆಲ್ಲಾ ಓಡಾಡಿಕೊಂಡಿತ್ತು. ಒಮ್ಮೊಮ್ಮೆ ಹೊರಗೂ ಹೋಗಿ ಬರುತ್ತದೆ. ಅದಕ್ಕೆ ನೆರೆಹೊರೆಯವರು ತುಂಬಾ ತೊಂದರೆ ನೀಡುತ್ತಿದ್ದಾರೆ. ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಅದನ್ನು ಸಾಕಿದ್ದಕ್ಕಾಗಿ ಒಂದೂವರೆ ತಿಂಗಳಿಂದ ನಮಗೂ ಕಿರುಕುಳ ನೀಡುತ್ತಿದ್ದಾರೆ’ ಎಂದು ಮಲ್ಲೇಶ್ವರ 6ನೇ ತಿರುವಿನ ನಿವಾಸಿ ಅನುರಾಧಾ ತಿಳಿಸಿದ್ದಾರೆ.